ADVERTISEMENT

ವಿವಿಗಳಿಗೆ ಉತ್ತೇಜನ ಕೊರತೆ: ಭಾರದ್ವಾಜ್‌

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2014, 19:07 IST
Last Updated 2 ಮಾರ್ಚ್ 2014, 19:07 IST

ಬೆಂಗಳೂರು: ‘ದೇಶದ ವಿಶ್ವವಿದ್ಯಾಲಯ­ಗಳಿಗೆ ದೊಡ್ಡ ಮಟ್ಟದಲ್ಲಿ ಉತ್ತೇಜನ ನೀಡುತ್ತಿಲ್ಲ. ವಿವಿಗಳಲ್ಲಿ ಸಂಶೋಧನಾ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ಒತ್ತು ನೀಡುತ್ತಿಲ್ಲ’ ಎಂದು ರಾಜ್ಯಪಾಲ ಎಚ್‌.ಆರ್‌.ಭಾರದ್ವಾಜ್‌ ಬೇಸರ ವ್ಯಕ್ತಪಡಿಸಿದರು.

ಜಯನಗರ ನ್ಯಾಷನಲ್‌ ಕಾಲೇ­ಜಿನ­ ಎಚ್‌.ಎನ್‌.ಕಲಾಕ್ಷೇತ್ರದಲ್ಲಿ ಭಾನು­­­­ವಾರ ನಡೆದ ‘ವಿಮೆನ್ಸ್‌ ಪೀಸ್‌ ಲೀಗ್‌’ ನ ವಜ್ರಮಹೋತ್ಸವದ ಸಮಾ­ರೋಪ ಸಮಾ­ರಂಭದಲ್ಲಿ ಮಾತ­ನಾಡಿ­ದರು.‘ಅಮೆರಿಕ ಮತ್ತಿತರ ರಾಷ್ಟ್ರಗಳಲ್ಲಿ ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಉತ್ತೇನ ನೀಡಲಾಗುತ್ತಿದೆ. ಹೀಗಾಗಿ ಆ ರಾಷ್ಟ್ರ­ಗಳು­ ತ್ವರಿತಗತಿಯಲ್ಲಿ ಅಭಿವೃದ್ಧಿ
ಸಾಧಿ­ಸು­­ತ್ತಿವೆ’ ಎಂದು ಅವರುಅಭಿ­ಪ್ರಾಯ­ಪಟ್ಟರು.

‘2007ರಲ್ಲೇ ಸಂಸತ್‌ನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದ್ದೆ. ಆದರೆ, ಈ ಮಸೂದೆಗೆ ಈ ವರೆಗೆ ಒಪ್ಪಿಗೆ ಸಿಕ್ಕಿಲ್ಲ. ಪೂರ್ವಗ್ರಹ­ಪೀಡಿತ ಮನೋಭಾವದ ಕಾರಣದಿಂದ ಒಪ್ಪಿಗೆ ಸಿಗುವುದು ವಿಳಂಬ ಆಗುತ್ತಿದೆ. ಮಹಿಳೆ­ಯರು ಸಂಸತ್‌ನಲ್ಲಿ ಹೆಚ್ಚಿನ ಸಂಖ್ಯೆ­ಯಲ್ಲಿ ಇದ್ದರೆ ಕಲಾಪ ಸುಗಮ­ವಾಗಿ ಸಾಗುತ್ತದೆ’ ಎಂದು ಅವರು ತಿಳಿಸಿದರು.
ನಿವೃತ್ತ ನ್ಯಾಯಮೂರ್ತಿ ವಿ.­ಜಗನ್ನಾಥ್‌,­ ‘ಆಧುನಿಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋ­ಭಾವ ಮೂಡಿಸುವ ಶಿಕ್ಷಣ ನೀಡಬೇಕು’ ಎಂದರು.

ಸಂಸ್ಥೆಯ ಅಧ್ಯಕ್ಷೆ ವಿಶಾಲಾಕ್ಷಿ ಎಸ್‌.­ರಾವ್‌­ ಅಧ್ಯಕ್ಷತೆ ವಹಿಸಿ, ‘ಮೌಲ್ಯಾ­­ಧಾ­­ರಿತ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಬಲ­ಪ­ಡಿ­ಸುವುದು ಸಂಸ್ಥೆಯ ಗುರಿ’ ಎಂದರು. ಇದೇ ಸಂದರ್ಭದಲ್ಲಿ ಪ್ರಫುಲ್ಲತಾ ಭಾರದ್ವಾಜ್‌ ಅವರು ಸಂಸ್ಥೆಯ ಸ್ಮರಣ ಸಂಚಿಕೆ ‘ನೈದಿಲೆ’­ಯನ್ನು ಬಿಡುಗಡೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.