ADVERTISEMENT

ಶೃಂಗೇರಿ: ನೀರಿನಲ್ಲಿ ಮುಳುಗಿ ಸಾವು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 19:55 IST
Last Updated 21 ಫೆಬ್ರುವರಿ 2011, 19:55 IST

ಶೃಂಗೇರಿ: ಇಲ್ಲಿನ ತುಂಗಾನದಿಯಲ್ಲಿ ಭಾನುವಾರ ಪ್ರವಾಸಿಯೊಬ್ಬರು ಕಾಲು ಜಾರಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಯನ್ನು ಅಭಿಜಿತ್ (25) ಎಂದು ಗುರುತಿಸಲಾಗಿದ್ದು ಇವರು ಮೂಲತಃ ಬೆಂಗಳೂರಿನ ಯಲಹಂಕದವರು.

ಇಲ್ಲಿಗೆ ಶನಿವಾರ ಆಗಮಿಸಿ ತಂಗಿದ್ದ ಅವರು ಭಾನುವಾರ ಸ್ನಾನಕ್ಕೆಂದು ಬೆಳಿಗ್ಗೆ ನದಿಗೆ ಇಳಿದಾಗ ದುರ್ಘಟನೆ ಸಂಭವಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.