ADVERTISEMENT

‘ವಿಭೂತಿಪುರ ಕೆರೆ ಒತ್ತುವರಿ ತೆರವಿಗೆ ಕ್ರಮ’

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 19:30 IST
Last Updated 14 ಡಿಸೆಂಬರ್ 2013, 19:30 IST

ಕೃಷ್ಣರಾಜಪುರ: ವಿಭೂತಿಪುರ ಕೆರೆ 45 ಎಕರೆ ಪಸರಿಸಿದ್ದು  4 ಎಕರೆ ಒತ್ತುವ ರಿಯಾಗಿದೆ. ಒತ್ತುವರಿ ತೆರವುಗೊಳಿಸಿ ಕೆರೆಯನ್ನು ಅಭಿವೃದ್ಧಿಗೊಳಿಸಬೇಕು ಎಂದು ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಂಬ್ರೀನ್‌ ಕ್ವಾದ್ರಿ ಒತ್ತಾಯಿಸಿದರು.

ಶನಿವಾರ ಏರ್ಪಡಿಸಿದ್ದ ಕೆರೆ ರಕ್ಷಣೆಗೆ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೆರೆಗೆ ಕೊಳಚೆ ನೀರು ಹರಿಯುತ್ತಿದೆ. ಇದರಿಂದ ಕೆರೆ  ಕಲುಷಿತವಾಗುತ್ತಿದೆ ಎಂದು ವಿಷಾದಿಸಿದರು.

ಶಾಸಕ ಬೈರತಿ ಎ ಬಸವರಾಜು ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ₨ 2.5 ಕೋಟಿ ಮಂಜೂರು ಮಾಡಿದೆ. ತಂತಿ ಬೇಲಿ ನಿರ್ಮಾಣದ ಜತೆಗೆ ಶೌಚಾ ಲಯವನ್ನು ಶಾಸಕರ ಅನುದಾನದಡಿ ನಿರ್ಮಿಸಲಾಗುವುದು. ಕೆರೆ ಗಡಿಯನ್ನು ಗುರುತಿಸುವ ಕಾರ್ಯ ಮುಗಿದಿದ್ದು 15 ದಿನಗಳ ಒಳಗೆ  ಒತ್ತುವರಿ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು.ವಿಭೂತಿಪುರ ಕೆರೆ ಜೊತೆಗೆ ದೊಡ್ಡನಕ್ಕುಂದಿ ಕೆರೆಯನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.