ADVERTISEMENT

ಪ್ರಜಾವಾಣಿ ಮುಖ್ಯವರದಿಗಾರ ರಾಜೇಶ್ ರೈ ಚಟ್ಲ ಸೇರಿ 52 ಮಂದಿಗೆ ಕೆಂಪೇಗೌಡ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 17:04 IST
Last Updated 26 ಜೂನ್ 2025, 17:04 IST
ರಾಜೇಶ್‌ ರೈ ಚಟ್ಲ
ರಾಜೇಶ್‌ ರೈ ಚಟ್ಲ   

ಬೆಂಗಳೂರು: ‘ಪ್ರಜಾವಾಣಿ’ ಮುಖ್ಯ ವರದಿಗಾರ ರಾಜೇಶ್ ರೈ ಚಟ್ಲ, ನಿವೃತ್ತ ಐಎಎಸ್‌ ಅಧಿಕಾರಿಗಳಾದ ಬಿ.ಎಸ್‌. ಪಾಟೀಲ,  ಸಿದ್ದಯ್ಯ, ಉಮಾಶಂಕರ್‌, ಜೈಕರ್ ಜರೋಮ್, ನಗರ ಯೋಜಕ ರವಿಚಂದರ್‌,  ಸಂಗೀತಾ ಕಟ್ಟಿ, ಪತ್ರಕರ್ತ ದೀಪಕ್‌ ತಿಮಯ, ಡಿ.ಎಸ್‌. ಮ್ಯಾಕ್ಸ್‌ ಸಂಸ್ಥೆಯ ದಯಾನಂದ್‌ ಸೇರಿದಂತೆ 52 ಮಂದಿಗೆ  ಬಿಬಿಎಂಪಿಯ ‘ನಾಡಪ್ರಭು ಕೆಂಪೇಗೌಡ ಪ್ರಶಸ್ತಿ’ ಪ್ರಕಟಿಸಲಾಗಿದೆ.

ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಜೂನ್‌ 27ರ ಸಂಜೆ ನಡೆಯುವ ಕೆಂಪೇಗೌಡರ 516ನೇ ಜಯಂತಿಯ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ₹1 ಲಕ್ಷ ನಗದು ಹಾಗೂ ಫಲಕವನ್ನು ಒಳಗೊಂಡಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಬಿಎಂಪಿಯ 51 ಸಿಬ್ಬಂದಿಗೆ ಉತ್ತಮ ಅಧಿಕಾರಿ/ ನೌಕರರ ಪ್ರಶ್ತಿಯನ್ನು ಈ ಸಂದರ್ಭದಲ್ಲಿ ಪ್ರದಾನ ಮಾಡಲಾಗುತ್ತದೆ.

ADVERTISEMENT

ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು: ನಂದಕುಮಾರ್‌, ಎಂ.ಜಿ. ರಾಜಗೋಪಾಲ್, ಅರುಣ್‌ ಪೈ, ಡಾ. ವೆಂಕಟಪ್ಪ, ದೀಪಕ್‌ ತಿಮಯ, ಸತೀಶ್‌, ಮಾರಸಪ್ಪ ರವಿ, ದರ್ಶನ್‌ ಗೌಡ, ಅವಿರಾಜ್‌, ಶ್ಯಾಮ್‌ಸುಂದರ್‌, ಪ್ರೊ. ಮಿಶ್ರಾ, ಬಿ.ಎಸ್‌. ಪಾಟೀಲ, ಸಿದ್ದಯ್ಯ, ರವಿಚಂದರ್‌, ಉಮಾಶಂಕರ್‌, ಜೈಕರ್ ಜರೋಮ್, ದಯಾನಂದ್‌, ಕಲ್ಪನಾ ಶಿವಣ್ಣ, ಚಂದ್ರಶೇಖರ್‌ ರಾಜು, ವರ್ಮಾ, ಹರ್ಷ ಹಂಪನಾ ನಾಗರಾಜು, ಕೆ.ಎಂ. ನಾಗರಾಜು, ಟಿ.ಎಸ್‌. ಲೂಕಸ್‌, ಪದ್ಮಶ್ರೀ, ಎಂ. ಚಂದ್ರರೆಡ್ಡಿ, ಎ. ಆರೋಗ್ಯಪ್ಪ, ವಿ.ಎಸ್‌. ಪ್ಯಾಟ್ರಿಕ್‌ ರಾಜು, ಸಂಗೀತ ಕಟ್ಟಿ, ಡಾ. ಗೌರಿ ಸುಬ್ರಮಣ್ಯ, ವಿದ್ವಾನ್‌ ಆರ್‌.ಕೆ. ಶಂಕರ್‌, ಎಚ್‌.ಆರ್‌. ಭಾರ್ಗವ್‌, ಎಚ್‌. ತಿಮ್ಮರಾಜ್‌ ಅರಸ್‌, ರಾಜೇಶ್‌ ರೈ ಚಟ್ಲ, ಭಾವನ ನಾಗಯ್ಯ, ಮಹೇಶ್‌ ಭೂಪತಿ, ಧನುಷ್ ಎಂ, ಎಂ. ಅಭಿಮನ್ಯು, ವಾನ್ಯವಿ ಬಿ.ಎಸ್‌, ಡಾ. ವಾಸು, ರಾಧಿಕಾ ಸ್ವಾಮಿ, ರವಿಗೌಡ ಜಕ್ಕೂರು, ವಿದೂಷಿ ರೇಖಾ ಜಗದೀಶ್‌, ದ್ಯಾಮಣ್ಣ ಎಂ. ಶಾಸ್ತ್ರಿ, ಬಿ.ಪಿ. ಆರಾಧ್ಯ, ಮರಿಮಲ್ಲಯ್ಯ, ಸಿ. ಶಿವರಾಜು, ಬಿ.ಎಂ. ಶಿವರುದ್ರಯ್ಯ, ವೈ.ಕೆ. ಬೆನ್ನೂರು, ನಂದಿತಾ ಸುಬ್ಬರಾವ್‌, ಅತೀಕ್‌ ಅಹಮದ್‌ ಬೇಗ್‌, ಸಂಗೀತಾ ಜೈನ್‌, ಎನ್‌. ದೇವರಾಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.