ಬೆಂಗಳೂರು: ‘ಮಕ್ಕಳು ತಂತ್ರಜ್ಞಾನದ ಮೇಲಿನ ಒಲವು ಹೆಚ್ಚಾಗಿದ್ದು, ಸೃಜನಶೀಲತೆ ಕಡಿಮೆಯಾಗುತ್ತಿದೆ’ ಎಂದು ರಾಷ್ಟ್ರೀಯ ಕೋಕೋ ಆಟಗಾರ್ತಿ ಶೋಭಾ ನಾರಾಯಣ್ ಬೇಸರ ವ್ಯಕ್ತಪಡಿಸಿದರು.
ಯಲಹಂಕ ಉಪನಗರದ ಹೊಯ್ಸಳ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಚೈತನ್ಯ ಟೆಕ್ನೋ ಶಾಲೆಯ (ಯಲಹಂಕ ಮತ್ತು ಎಂ.ಎಸ್. ಪಾಳ್ಯ ಶಾಖೆ) ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಚೈತನ್ಯ ಟೆಕ್ನೋ ಶಾಲೆಯ ರಾಮರಾವ್, ‘ಸ್ವಾಮಿ ವಿವೇಕಾನಂದರು ದೇಶದ ಅಭಿವೃದ್ಧಿಗೆ ಯುವಶಕ್ತಿ ಅವಶ್ಯಕತೆಯಿದೆ ಎಂದಿದ್ದರು. ಈ ದಿಸೆಯಲ್ಲಿ ಯುವಜನಾಂಗ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಅತ್ಯವಶ್ಯಕ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.