ADVERTISEMENT

ಅಭಿಮಾನ್ ಸ್ಟುಡಿಯೊ ಜಾಗಕ್ಕಾಗಿ ಹೋರಾಟ: ಹಾಸ್ಯನಟ ಟಿ.ಎನ್‌. ಬಾಲಕೃಷ್ಣ ಪುತ್ರಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 14:52 IST
Last Updated 5 ಸೆಪ್ಟೆಂಬರ್ 2025, 14:52 IST
   

ಬೆಂಗಳೂರು: ‘ಅಭಿಮಾನ್ ಸ್ಟುಡಿಯೊ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳುವ ಸರ್ಕಾರದ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ಈ ಹಿಂದೆ 10 ಎಕರೆ ಜಮೀನು ಮಾರಾಟದಲ್ಲಿ ಅವ್ಯವಹಾರ ನಡೆದಿದ್ದು, ಸರ್ಕಾರವೂ ಇದರಲ್ಲಿ ಭಾಗಿಯಾಗಿದೆ’ ಎಂದು ಹಾಸ್ಯನಟ ಟಿ.ಎನ್‌. ಬಾಲಕೃಷ್ಣ ಅವರ ಪುತ್ರಿ ಗೀತಾ ಬಾಲಿ ಆರೋಪಿಸಿದರು. 

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉತ್ತರಹಳ್ಳಿ–ಕೆಂಗೇರಿ ರಸ್ತೆಯಲ್ಲಿರುವ ಅಭಿಮಾನ್ ಸ್ಟುಡಿಯೊ ಭೂಮಿಯನ್ನು ಅರಣ್ಯ ಇಲಾಖೆ ಮರಳಿ ಪಡೆಯುತ್ತಿರುವ ಆದೇಶ ಪ್ರತಿ ನನಗೆ ತಲುಪಿಲ್ಲ. ಸರ್ಕಾರವು ಈ ಜಮೀನನ್ನು ಮುಟ್ಟುಗೋಲು ಹಾಕಿಕೊಂಡರೆ, ಕಾನೂನು ಹೋರಾಟ ಮಾಡಲಾಗುವುದು. ನಮ್ಮ ತಂದೆಯ ಹೆಸರಿನಲ್ಲಿ ಇರುವ ಜಾಗವನ್ನು ಉಳಿಸಿಕೊಂಡು, ಅದನ್ನು ಅಭಿವೃದ್ಧಿಪಡಿಸಲು ಶ್ರಮಿಸುತ್ತೇನೆ’ ಎಂದು ಹೇಳಿದರು. 

‘ತಂದೆಯ ಜಾಗ ತಂದೆಯ ಹೆಸರಿನಲ್ಲಿಯೇ ಉಳಿಯಬೇಕು. ನಾನು ಅದನ್ನು ಮಾರಾಟ ಮಾಡುವುದಿಲ್ಲ. ಅಲ್ಲಿ ವಿಷ್ಣುವರ್ಧನ ಅವರ ಸ್ಮಾರಕ ನಿರ್ಮಿಸಲು ನನ್ನ ಬೆಂಬಲವಿದೆ’ ಎಂದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.