ADVERTISEMENT

ಕಾರುಗಳಿಗೆ ಡಿಕ್ಕಿ ಹೊಡೆದ ಸಿಲಿಂಡರ್ ತುಂಬಿದ್ದ ಲಾರಿ: ಒಬ್ಬ ಸಾವು

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 6:28 IST
Last Updated 16 ಮಾರ್ಚ್ 2020, 6:28 IST
ಅಪಘಾತ ಸಂಭವಿಸಿದ ಸ್ಥಳ
ಅಪಘಾತ ಸಂಭವಿಸಿದ ಸ್ಥಳ    

ಬೆಂಗಳೂರು: ಇಂದಿರಾನಗರದ ಬಿನ್ನಮಂಗಲ ಸಿಗ್ನಲ್ ಬಳಿ ಅಪಘಾತ ಸಂಭವಿಸಿದ್ದು, ಒಬ್ಬ ಮೃತಪಟ್ಟಿದ್ದಾರೆ.

ರಸ್ತೆ ಬದಿಯಲ್ಲಿ ನಿಂತಿದ್ದ ಎರಡು ಕಾರಿಗಳಿಗೆ ಹಿಂದಿನಿಂದ ಸಿಲಿಂಡರ್ ತುಂಬಿದ್ದ ಲಾರಿಯಿಂದ ಡಿಕ್ಕಿ ಹೊಡೆದಿ ಪರಿಣಾಮ ಕಾರು ಚಾಲಕ ರಾಮಚಂದ್ರ ಎಂಬುವವರು ಮೃತಪಟ್ಟಿದ್ದಾರೆ. ಅವರನ್ನು ಮೈಸೂರು ನಿವಾಸಿ ಎಂಬುದಾಗಿ ತಿಳಿದುಬಂದಿದೆ.

ಸ್ಥಳಕ್ಕೆ ಹಲಸೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ADVERTISEMENT

ಕಾರಿನ ಏರ್ ಬ್ಯಾಗ್ ತೆರೆದು ಇನ್ನೊಬ್ಬ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಪಘಾತದ ನಂತರ ಲಾರಿ ತೊರೆದು ಚಾಲಕ ತಪ್ಪಿಸಿಕೊಂಡು ಓಡಿಹೋಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.