ಬೆಂಗಳೂರು: ಅಮೆರಿಕದಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡು ಜೀವನ್ಮರಣದ ನಡುವೆ ಹೋರಾಟ ನಡೆಸು
ತ್ತಿದ್ದ ಯುವಕನೊಬ್ಬ ನಿಗೆ ಸಕ್ರಾವರ್ಲ್ಡ್ ಆಸ್ಪತ್ರೆ ವೈದ್ಯರು ಮರುಜೀವ ನೀಡಿದೆ
ಪ್ರವೀಣ್ ರಾಜ್ ರಾಧಾ(36) ಎಂಬುವವರಿಗೆ ಕಳೆದ ವರ್ಷ ಮೇನಲ್ಲಿ ಅಪಘಾತ ಸಂಭವಿಸಿತ್ತು. ಮಿದುಳು ಇತರ ಭಾಗಗಳಿಗೆ ತೀವ್ರ ಪೆಟ್ಟಾಗಿದ್ದು, ಕೋಮಾ ಸ್ಥಿತಿಗೆ ತಲುಪಿದ್ದರು. ಅಮೆರಿಕದ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಅಲ್ಲಿನ ವೈದ್ಯರು ಬದುಕುಳಿಯುವ ಸಾಧ್ಯತೆ ಶೇ 1ಕ್ಕಿಂತ ಕಡಿಮೆ ಎಂದು ಅಂದಾಜಿಸಿದ್ದರು. ವಿಶೇಷ ವಿಮಾನದ ಮೂಲಕ ಅವರನ್ನು ಭಾರತಕ್ಕೆ ಕರೆತಂದು ಸಕ್ರಾವರ್ಲ್ಡ್ ಆಸ್ಪತ್ರೆಗೆ ದಾಖಲಿಸ ಲಾಯಿತು.
‘ನಾವು ಅವರನ್ನು ಉಳಿಸಿಕೊಂಡಿ ದ್ದೇವೆ’ ಎಂದು ಆಸ್ಪತ್ರೆಯ ನರ ಪುನಶ್ಚೇತನ ವಿಭಾಗದ ಮುಖ್ಯಸ್ಥ ಡಾ. ಮಹೇಶ್ವರಪ್ಪ ತಿಳಿಸಿದ್ದಾರೆ.
‘ಮಿದುಳಿನ ಆಘಾತದಿಂದ ಬಳಲುತ್ತಿರುವವರ ಗುಣಪಡಿಸುವ ಪ್ರಕ್ರಿಯೆಯಲ್ಲಿ ನರಪುನಶ್ಚೇತನ ಮಹತ್ವದ ಪಾತ್ರ ವಹಿಸುತ್ತದೆ’ ಎಂದು ತಿಳಿಸಿದ್ದಾರೆ.
‘3–4 ತಿಂಗಳ ನಿರಂತರ ಚಿಕಿತ್ಸೆ ನಂತರ ಪ್ರವೀಣ್ ಅವರ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆಯಾಗಿದ್ದು, ದೈನಂದಿನ ಬಹುತೇಕ ಚಟುವಟಿಕೆಗಳನ್ನು ತಾವೇ ಕೈಗೊಳ್ಳುತ್ತಿದ್ದಾರೆ ಎಂದು ಡಾ. ಮಹೇಶ್ವರಪ್ಪ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.