ಬೆಂಗಳೂರು: ನಗರದಿಂದ ಮಂಗಳೂರಿಗೆ ಆ. 20ರಂದು ಹೋಗುವ ಜೆಟ್ ಏರ್ವೇಸ್ನ ವಿಮಾನ ಪ್ರಯಾಣ ದರವನ್ನು ₹68,545ಕ್ಕೆ (ಒಬ್ಬರಿಗೆ) ಏರಿಕೆ ಮಾಡಲಾಗಿದ್ದು, ಇದಕ್ಕೆ ಟ್ವಿಟರ್ನಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಈ ದರ ₹4,480 ಇರುತ್ತಿತ್ತು. ಏರಿಕೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ಹಲವರು, ‘ಮಂಗಳೂರಿನಲ್ಲಿ ಪ್ರವಾಹ ಸ್ಥಿತಿ ಇದೆ. ಜನರು ಕಷ್ಟದಲ್ಲಿ ಸಿಲುಕಿದ್ದು, ಅವರನ್ನು ರಕ್ಷಿಸಲೆಂದು ಹಲವರು ಬೆಂಗಳೂರಿನಿಂದ ಹೋಗುತ್ತಿದ್ದಾರೆ. ಇದೇ ಸಂದರ್ಭದಲ್ಲೇ ವಿಮಾನದ ದರ ಏರಿಕೆ ಮಾಡಿರುವುದು ಖಂಡನೀಯ’ ಎಂದು ಟೀಕಿಸಿದ್ದಾರೆ.
‘ಸತತ ಮಳೆ, ಗುಡ್ಡ ಕುಸಿತದ ಕಾರಣ ಮಂಗಳೂರು ಹಾಗೂ ಸುತ್ತಮುತ್ತ ಊರುಗಳಿಗೆ ಬಸ್ಗಳ ಸಂಚಾರ ಕಡಿಮೆ ಆಗಿದೆ. ಅದನ್ನೇ ಬಂಡವಾಳ ಮಾಡಿಕೊಂಡಿರುವ ವಿಮಾನ ಕಂಪನಿಗಳು, ದುಡ್ಡು ಮಾಡುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.