ADVERTISEMENT

ಮೆಗಾ ಸಿಟಿ ನಿರ್ಮಾಣ ಸಾಧ್ಯವೇ ಎಂಬುದು ಪ್ರಶ್ನೆಯಲ್ಲ; ಆದರೆ..: ಅಮಂಡಾ ಪುರವಂಕರ

ಡೆಕ್ಕನ್‌ ಹೆರಾಲ್ಡ್‌ ಬೆಂಗಳೂರು 2040 ಸಮಾವೇಶ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 10:01 IST
Last Updated 20 ಫೆಬ್ರುವರಿ 2026, 10:01 IST
   

DH Bengaluru 2040 Summitಬೆಂಗಳೂರು: 2040ರ ಹೊತ್ತಿಗೆ ಮೆಗಾ ಸಿಟಿಯಾಗಿ ವಿಕಸನಗೊಳ್ಳಲಿರುವ ಬೆಂಗಳೂರನ್ನು ಮುಂಬರುವ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸುವ ಬದಲು, ಆಂತರಿಕ ವಿನ್ಯಾಸಗಳ ಮೂಲಕ ಮುನ್ನಡೆಸಬೇಕು ಎಂದು ಪುರವಂಕರ ಲಿಮಿಟೆಡ್‌ನ ಪೂರ್ಣಾವಧಿ ನಿರ್ದೇಶಕಿ ಅಮಂಡಾ ಜಾಯ್‌ ಪುರವಂಕರ ಹೇಳಿದ್ದಾರೆ.

ಡೆಕ್ಕನ್‌ ಹೆರಾಲ್ಡ್‌ ಬೆಂಗಳೂರು 2040 ಸಮಾವೇಶದಲ್ಲಿ ಮಾತನಾಡಿರುವ ಅವರು, ಬೆಂಗಳೂರಿನ ಸ್ಥಳೀಯರಾಗಿ ನಗರದೊಂದಿಗಿನ ತಮ್ಮ ಒಡನಾಟದ ಕುರಿತು ಹಂಚಿಕೊಂಡಿದ್ದಾರೆ.

'ನನ್ನ ತಂದೆ, 50 ವರ್ಷಗಳಿಂದಲೂ ನಗರದಲ್ಲಿ ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದಾರೆ. ಶಾಂತ, ಹಸಿರು 'ಉದ್ಯಾನ ನಗರ'ವು ವೇಗ ಮತ್ತು ಮಹತ್ವಾಕಾಂಕ್ಷೆಗಳೊಂದಿಗೆ ಬದಲಾಗುತ್ತಿರುವುದನ್ನು ಗಮನಿಸಿದ್ದೇನೆ' ಎಂದಿದ್ದಾರೆ.

ADVERTISEMENT

'ಮೆಗಾ ಸಿಟಿ ನಿರ್ಮಾಣ ಸಾಧ್ಯವೇ ಎಂಬುದು ಪ್ರಶ್ನೆಯಲ್ಲ. ಆದರೆ, ಎಷ್ಟು ಪ್ರಬುದ್ಧರಾಗಿ ನಾವು ಬೆಳೆಯುತ್ತೇವೆ ಎಂಬುದು ಮುಖ್ಯ. ಸಂವೇದನೆ ಇಲ್ಲದೆ, ಮಾನದಂಡಗಳನ್ನು ರೂಪಿಸಿಕೊಳ್ಳುವುದು ಒತ್ತಡ ಸೃಷ್ಟಿಸುತ್ತದೆ. ಮಾನವೀಯತೆ ಇಲ್ಲದ ತಂತ್ರಜ್ಞಾನವು ಸ್ವೇಚ್ಛೆಯಾಗಬಹುದು' ಎಂದು ಪ್ರತಿಪಾದಿಸಿದ್ದಾರೆ.

ಬೆಂಗಳೂರಿನ ಜನಸಂಖ್ಯಾ ಪರಿವರ್ತನೆಯ ಕುರಿತೂ ಮಾತನಾಡಿರುವ ಅವರು, ನಗರದಲ್ಲಿನ ಜನರ ವಯಸ್ಸಿನ ಸರಾಸರಿಯು, ರಾಷ್ಟ್ರೀಯ ಸರಾಸರಿಗಿಂತ 20 ವರ್ಷ ಕಡಿಮೆ ಇದೆ ಎಂದು ಹೇಳಿದ್ದಾರೆ.

'ಹಿಂದಿನ ಮೂಲಸೌಕರ್ಯಗಳು ಹಾಗೂ ಅಂದಾಜುಗಳ ಮೇಲೆ ಯುವ ನಗರವನ್ನು ಮುನ್ನಡೆಸಲು ಸಾಧ್ಯವೇ ಇಲ್ಲ. ಪ್ರಜ್ಞಾವಂತ ಆಡಳಿತ ಹಾಗೂ ಮಾನವ – ತಂತ್ರಜ್ಞಾನದ ಸಹಕಾರವಿರುವ ಪರಿಸರ ವ್ಯವಸ್ಥೆಯು ಈ ನಗರದಲ್ಲಿನ ತಾಯಂದಿರ ಬಕೆಯಾಗಿದೆ' ಎಂದು ಹೇಳಿದ್ದಾರೆ.

ಎಐ ನಿರ್ಣಾಯಕ
ತಂತ್ರಜ್ಞಾನವು ನಗರದ ರಚನೆಯೊಂದಿಗೆ ಹೇಗೆ ಬೆಸೆದುಕೊಂಡಿದೆ ಎಂಬುದರ ಬಗ್ಗೆಯೂ ಅಮಂಡಾ ವಿವರಿಸಿದ್ದಾರೆ. ಕೃತಕ ಬುದ್ಧಿಮತ್ತೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಅವರು, ಸಂಚಾರ ದಟ್ಟಣೆ ನಿರ್ವಹಣೆ, ಕಾನೂನು ಜಾರಿ, ಮೂಲಸೌಕರ್ಯ ಅಭಿವೃದ್ಧಿ, ನಗರ ಯೋಜನೆಯ ವಿಚಾರಗಳಲ್ಲಿ ಎಐ ನಿರ್ಣಾಯಕ ಪಾತ್ರ ವಹಿಸಲಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.