
ಬೆಂಗಳೂರು: ಅಪಾಯಕಾರಿ ವಸ್ತುಗಳ ನಿರ್ವಹಣೆ ಕುರಿತು ಆಚಾರ್ಯ ಮತ್ತು ಬಿ.ಎಂ. ರೆಡ್ಡಿ ಕಾಲೇಜ್ ಆಫ್ ಫಾರ್ಮಸಿ ವತಿಯಿಂದ ಮೂರು ದಿನಗಳ ಇಂಡೋ–ಯುಎಸ್ ಸಿಂಪೋಸಿಯಂ ನಡೆಯಿತು.
ಅಪಾಯಕಾರಿ ವಸ್ತುಗಳ ಸುರಕ್ಷಿತ ನಿರ್ವಹಣೆ, ನಿಯಂತ್ರಣ ಕ್ರಮಗಳ ಕುರಿತು ಜಾಗೃತಿ ಮೂಡಿಸಲಾಯಿತು.
ಅಮೆರಿಕ ಮತ್ತು ಭಾರತದ ತಜ್ಞರು ಅನುಭವ ಮತ್ತು ಪರಿಣತಿಯನ್ನು ಹಂಚಿಕೊಂಡರು. ಸಂಪನ್ಮೂಲ ವ್ಯಕ್ತಿಗಳಾಗಿ ಯುಎಸ್ನ ಫುಲ್ಬ್ರೈಟ್ ವಿದ್ವಾಂಸ ಆರ್. ವಿಶ್ವನಾಥ್, ಜ್ಯುಬಿಲೆಂಟ್ ಬಯೋಸಿಸ್ನ ವಿಜ್ಞಾನಿ ರಾಬರ್ಟ್ ಎ. ವೆಸ್ಟ್, ಕೆಜಿಎಸ್ ಎನ್ವಿರಾನ್ಮೆಂಟಲ್ ಪ್ರಾಂಶುಪಾಲ ಕೆಂದ್ರಾ ಶ್ರೋಯರ್, ಫ್ಲಾರಿಡಾ ಇಂಟರ್ನ್ಯಾಷನಲ್ ಯುನಿವರ್ಸಿಟಿಯ ಡೀನ್ ಇನೇಸ್ ಆರ್. ಟ್ರಿಯೇ, ಯುನಿವರ್ಸಿಟಿ ಆಫ್ ನೆವಾಡಾದ ಸಹಾಯಕ ಪ್ರಾಧ್ಯಾಪಕರಾದ ಎರಿಕಾ ಜೆ. ಮಾರ್ಟಿ ಭಾಗವಹಿಸಿದ್ದರು.
ತಜ್ಞರಾದ ಪಾಲ್ ಹೌಸ್ಮನ್, ಕ್ಯಾಥಿ ನುನೆಜ್, ಕೆಲ್ಸಿ ಎಲ್. ಫೋರ್ಡ್, ಟಿಮೊಥಿ ಸ್ಟಿರಪ್, ಸ್ಟೀಫನ್ ಬೆನೆಟ್, ಎಸ್.ಆರ್. ಸುಬ್ರಹ್ಮಣ್ಯ, ನ್ಯಾ. ಸುಭಾಷ್ ಬಿ. ಅಡಿ, ಹಾಗೂ ವೈ.ಎ. ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.