ADVERTISEMENT

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯ; ಮಕ್ಕಳ ಸಾಹಿತ್ಯೋತ್ಸವ ಆಯೋಜನೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2018, 18:27 IST
Last Updated 14 ನವೆಂಬರ್ 2018, 18:27 IST

ಬೆಂಗಳೂರು: ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯ ನ.15ರಂದು ಆಡುಗೋಡಿಯ ಪಟೇಲ್ ಮುನಿಚಿನ್ನಪ್ಪ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಆವರಣದಲ್ಲಿ ಒಂದು ದಿನದ ಮಕ್ಕಳ ಸಾಹಿತ್ಯೋತ್ಸವವನ್ನು ಆಯೋಜಿಸಿದೆ.

ಮಕ್ಕಳ ಬರವಣಿಗೆಯನ್ನು ವಿಕಸನಗೊಳಿಸುವುದು ಸಾಹಿತ್ಯೋತ್ಸವದ ಮುಖ್ಯ ವಿಷಯ. ಮಕ್ಕಳ ಸಾಹಿತಿಗಳು ಹಾಗೂ ಚಿತ್ರ ಕಲಾವಿದರೊಂದಿಗೆ ಮಕ್ಕಳ ಸಂವಾದಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿಜ್ಞಾನದ ಬರಹಗಾರ ನಾಗೇಶ ಹೆಗಡೆ ಸಾಹಿತ್ಯೋತ್ಸವವನ್ನು ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT