ಬೆಂಗಳೂರು: ನಗರದ ಕೇಂದ್ರ ಭಾಗದಲ್ಲಿರುವ ಉಪ್ಪಾರಪೇಟೆ ಠಾಣೆ ಪಿಎಸ್ಐಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮೆಜೆಸ್ಟಿಕ್ ನಿಲ್ದಾಣ ಬಳಿಯೇ ಉಪ್ಪಾರಪೇಟೆ ಠಾಣೆ ಇದೆ. ಈ ಠಾಣೆ ಕಟ್ಟಡದಲ್ಲೇ ಪಶ್ಚಿಮ ವಿಭಾಗದ ಡಿಸಿಪಿ ಕಚೇರಿ ಇದ್ದು, ಅಲ್ಲಿಯ ಹೆಡ್ ಕಾನ್ಸ್ಟೆಬಲೊಬ್ಬರಲ್ಲಿ ಇತ್ತೀಚೆಗೆ ಸೋಂಕು ಕಾಣಿಸಿಕೊಂಡಿತ್ತು.ಕಚೇರಿಯನ್ನೇ ಸೀಲ್ಡೌನ್ ಮಾಡಲಾಗಿತ್ತು.
ಇದೀಗ ಉಪ್ಪಾರಪೇಟೆ ಠಾಣೆ ಪಿಎಸ್ಐಯೊಬ್ಬರಿಗೆ ಸೋಂಕು ತಗುಲಿದ್ದರಿಂದ, ಠಾಣೆಯನ್ನೂ ತಾತ್ಕಾಲಿಕವಾಗಿ ಸೀಲ್ಡೌನ್ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.