ಬೆಂಗಳೂರು: ‘ಸ್ವಚ್ಛತೆಯಲ್ಲಿ ಬೆಂಗಳೂರು 194ನೇ ಸ್ಥಾನದಿಂದ 214ನೇ ಕುಸಿದಿದೆ. ಪಾಲಿಕೆಯ ಕಸ ವಿಲೇವಾರಿ ಜವಾಬ್ದಾರಿ ಮರೆತು ದಂಧೆಯಲ್ಲಿ ತೊಡಗಿದ್ದು, ಹತ್ತು ವರ್ಷ ಕಳೆದರೂ ಉತ್ತಮ ಸ್ಥಾನ ಗಳಿಸುವುದು ಹಗಲುಗನಸು’ ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ವ್ಯಂಗ್ಯವಾಡಿದ್ದಾರೆ.
‘ಕಸದ ಮಾಫಿಯಾಗೆ ಸಂಪೂರ್ಣವಾಗಿ ತಲೆಬಾಗಿರುವ ಪಾಲಿಕೆ, ಪ್ರತಿ ವರ್ಷ ಕೋಟಿಗಟ್ಟಲೆ ಹಣವನ್ನು ಕಸ ವಿಲೇವಾರಿಗೆ ಖರ್ಚು ಮಾಡುತ್ತದೆ. ನಾಲ್ಕು ವರ್ಷದಿಂದಲೂ ಸ್ವಚ್ಛತೆಯಲ್ಲಿ 100ರ ಸ್ಥಾನದೊಳಗೆ ಬಂದಿಲ್ಲ. ಆದರೆ, ಪ್ರತಿ ವರ್ಷ ಸ್ವಚ್ಛ ಸರ್ವೇಕ್ಷಣೆಗೆ ಎಂದು ಜನರ ತೆರಿಗೆ ಹಣವನ್ನು ಹಾಳು ಮಾಡುತ್ತಿದೆ. ಇದರ ಬದಲು ಸ್ಪರ್ಧೆಯಲ್ಲಿ ಭಾಗವಹಿಸದಿರುವುದೇ ಉತ್ತಮ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.