ಬೆಂಗಳೂರು: ‘ಸ್ನೇಹಿತ ಕಿರುಕುಳ ನೀಡುತ್ತಿದ್ದಾನೆ’ ಎಂದು ಆರೋಪಿಸಿ ದೂರು ನೀಡಲು ಬಂದ ಬಾಂಗ್ಲಾದ ಯುವತಿಯನ್ನು ಜ್ಞಾನಭಾರತಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಾಂಗ್ಲಾದ ನೂಪುರ್ (23) ಬಂಧಿತ ಯುವತಿ. ವಿಚಾರಣೆ ನಡೆಸಿದಾಗ, ಆಕೆಯ ಬಳಿ ವೀಸಾ ಇಲ್ಲದಿರುವುದು ಗೊತ್ತಾಗಿದೆ. ತಕ್ಷಣ ಆಕೆಯನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ಮಲ್ಲತ್ತಹಳ್ಳಿಯ ಬಾಡಿಗೆ ಮನೆಯೊಂದರಲ್ಲಿ ನೂಪುರ್ ನೆಲೆಸಿದ್ದಳು. ನ. 1ರಂದು ಮಧ್ಯಾಹ್ನ 1 ಗಂಟೆಗೆ ಠಾಣೆಗೆ ಬಂದಿದ್ದ ಆಕೆ, ‘ಸ್ನೇಹಿತ ಸಾದಿಕ್ ಕುರ್ ರೆಹಮಾನ್ ಎಂಬಾತ ಮನೆಗೆ ಬಂದು, ಬಾಗಿಲು ಬಡಿದು ಕಿರುಕುಳ ನೀಡುತ್ತಿದ್ದಾನೆ. ಆತನ ವಿರುದ್ಧ ಕ್ರಮ ತೆಗೆದುಕೊಂಡು, ನನಗೆ ರಕ್ಷಣೆ ನೀಡಿ’ ಎಂದು ಯುವತಿ ದೂರು ಕೊಟ್ಟಿದ್ದಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.