ಬೆಂಗಳೂರು: ಅತಿಹೆಚ್ಚು ಮಳೆಯಿಂದ ಉಂಟಾದ ಹಾನಿಗೆ ಪರಿಹಾರ ನೀಡಬೇಕೆಂಬ ಬಿಬಿಎಂಪಿ ಮನವಿಗೆ ಸ್ಪಂದಿಸಿರುವ ಸರ್ಕಾರ ₹350 ಕೋಟಿ ನೀಡಲು ಸಮ್ಮತಿಸಿದೆ.
ಬಿಬಿಎಂಪಿ ಮನವಿ ಸಲ್ಲಿಸಿದ 10 ದಿನದ ನಂತರ ನಗರಾಭಿವೃದ್ಧಿ ಇಲಾಖೆ ಸೆ.28ರಂದು ಪರಿಹಾರ ಮೊತ್ತಕ್ಕೆ ಅನುಮೋದನೆ ನೀಡಿದೆ. ಕೆರೆಗಳ ನಡುವಿನ ಸಂಪರ್ಕ ಜಾಲವನ್ನು (ರಾಜಕಾಲುವೆ) ದುರುಸ್ತಿಪಡಿಸಲು ₹317 ಕೋಟಿ ವೆಚ್ಚ ಮಾಡಬೇಕು ಎಂದು ಸೂಚಿಸಲಾಗಿದೆ.
ಮಳೆಯಿಂದ ತೀವ್ರಹಾನಿಯಾಗಿರುವ ಮಹದೇವಪುರ ವಿಧಾನಸಭೆ ಕ್ಷೇತ್ರಕ್ಕೆ ₹160 ಕೋಟಿ ಮಂಜೂರಾಗಿದೆ. ಕೆ.ಆರ್. ಪುರ– ₹40 ಕೋಟಿ, ಬೊಮ್ಮನಹಳ್ಳಿ– ₹65 ಕೋಟಿ, ಬೆಂಗಳೂರು ದಕ್ಷಿಣ– ₹27.25 ಕೋಟಿ ಹಾಗೂ ಯಲಹಂಕ ಮತ್ತು ಬ್ಯಾಟರಾಯನಪುರ ತಲಾ ₹10 ಕೋಟಿ ನೀಡಲಾಗಿದೆ. ಉಳಿದ ₹33 ಕೋಟಿಯಲ್ಲಿ ನಗರದ 148 ಕೆರೆಗಳಿಗೆ ತೂಬು ಗೇಟ್ಗಳನ್ನು ಅಳವಡಿಸಲು ವಿನಿಯೋಗಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.