ಬೆಂಗಳೂರು: ಶೇಷಾದ್ರಿಪುರ ಠಾಣೆ ವ್ಯಾಪ್ತಿಯಲ್ಲಿ ಗಣೇಶ್ (33) ಎಂಬುವವರನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿದ್ದು, ಈ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ವಿ.ವಿ. ಗಿರಿ ಕಾಲೊನಿ ನಿವಾಸಿ ಗಣೇಶ್ ಅವರನ್ನು ಮಂಗಳವಾರ ಬೆಳಿಗ್ಗೆ ಕೊಲೆ ಮಾಡಲಾಗಿದ್ದು, ಪರಿಚಯಸ್ಥರೇ ಆಗಿರುವ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಗಣೇಶ್, 2020ರಲ್ಲಿ ಕೋವಿಡ್ ವೇಳೆ ತಮ್ಮ ಮನೆ ಬಳಿ ಬಡವರಿಗೆ ಹಾಲು ಹಂಚುತ್ತಿದ್ದರು. ಕಾಂಗ್ರೆಸ್ ಕಾರ್ಯಕರ್ತರದ್ದೇ ಇನ್ನೊಂದು ಗುಂಪು ಸಹ ಅದೇ ಸ್ಥಳದಲ್ಲಿ ಹಾಲು ವಿತರಿಸುತ್ತಿತ್ತು. ಹಾಲು ಹಂಚಿಕೆ ಸಂಬಂಧ ಪರಸ್ಪರ ಗಲಾಟೆ ನಡೆದಿತ್ತು. ಈ ಗಲಾಟೆಯಿಂದ ವೈಷಮ್ಯ ಬೆಳೆದಿತ್ತು. ಹೀಗಾಗಿ, ಗಣೇಶ್ ಅವರನ್ನು ಕೊಲೆ ಮಾಡಲು ಎದುರಾಳಿ ತಂಡ ಸಂಚು ರೂಪಿಸಿತ್ತು’ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.