ಸಾವು
ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಬೇಗೂರು ಬಳಿಯ ರಾಘವೇಂದ್ರ ಲೇಔಟ್ನಲ್ಲಿ ಸ್ನೇಹಿತರ ನಡುವೆ ಹಣಕಾಸು ವಿಚಾರಕ್ಕೆ ನಡೆದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ.
ದೇವೇಂದ್ರ ಸಿಂಗ್ (43) ಕೊಲೆಯಾದರು.
ಕೊಲೆ ಪ್ರಕರಣದ ಸಂಬಂಧ ದೇವೇಂದ್ರ ಸಿಂಗ್ ಅವರ ಸ್ನೇಹಿತ, ಆರೋಪಿ ಮೇವಾ ಲಾಲ್ ಎಂಬಾತನನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉತ್ತರಪ್ರದೇಶದ ದೇವೇಂದ್ರ ಸಿಂಗ್ ಕಳೆದ ಎಂಟು ವರ್ಷದಿಂದ ನಗರದಲ್ಲಿ ನೆಲಸಿದ್ದರು. ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದರು. ಸ್ನೇಹಿತನಾದ ಮೇವಾ ಲಾಲ್ನನ್ನು ಮೂರು ದಿನಗಳ ಹಿಂದೆಯಷ್ಟೇ ನಗರಕ್ಕೆ ಕರೆದುಕೊಂಡು ಬಂದು ಪೇಂಟಿಂಗ್ ಕೆಲಸಕ್ಕೆ ಸೇರಿಸಿದ್ದರು. ರಾಘವೇಂದ್ರ ಲೇಔಟ್ನ ಸಣ್ಣ ಮನೆಯಲ್ಲಿ ಒಟ್ಟಿಗೆ ವಾಸವಾಗಿದ್ದರು ಎಂದು ಪೊಲೀಸರು ಹೇಳಿದರು.
ಶನಿವಾರ ಬೆಳಿಗ್ಗೆ ಹಣ ಕೊಡುವಂತೆ ದೇವೇಂದ್ರ ಸಿಂಗ್ ಅವರನ್ನು ಆರೋಪಿ ಮೇವಾ ಲಾಲ್ ಕೇಳಿದ್ದ. ಆದರೆ, ದೇವೇಂದ್ರ ಸಿಂಗ್ ಹಣ ಕೊಡಲು ನಿರಾಕರಿಸಿದ್ದರು. ಕೋಪಗೊಂಡ ಆರೋಪಿ ದೇವೇಂದ್ರ ಸಿಂಗ್ ಜತೆ ಜಗಳವಾಡಿ, ಮರದ ತುಂಡಿನಿಂದ ಹೊಡೆದಿದ್ದ. ತೀವ್ರ ಹಲ್ಲೆಯಿಂದ ಕುಸಿದು ಬಿದ್ದಿದ್ದ ದೇವೇಂದ್ರ ಸಿಂಗ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.