ADVERTISEMENT

ರಾಜರಾಜೇಶ್ವರಿನಗರ: ವಿವಿಧೆಡೆ ಹನುಮ ಜಯಂತಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2024, 16:31 IST
Last Updated 13 ಡಿಸೆಂಬರ್ 2024, 16:31 IST
ಸಾಲುದೊಡ್ಡಿಯಲ್ಲಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿಯ ಪ್ರಯುಕ್ತ ವಿಶೇಷ ಪೂಜೆ ನಡೆಯಿತು
ಸಾಲುದೊಡ್ಡಿಯಲ್ಲಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿಯ ಪ್ರಯುಕ್ತ ವಿಶೇಷ ಪೂಜೆ ನಡೆಯಿತು   

ರಾಜರಾಜೇಶ್ವರಿನಗರ: ಲಕ್ಷ್ಮೀಪುರ ಸಮೀಪದ ಸಾಲುದೊಡ್ಡಿ ಬಳಿಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಹೋಮ, ಹವನ, ಪೂಜೆ ಪುನಸ್ಕಾರಗಳು ನಡೆದವು.

ಬೆಂಗಳೂರು ದಕ್ಷಿಣ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಅಶ್ವತ್ ನಾಯಕ್, ಚಿತ್ರದುರ್ಗದ ಬಂಜಾರಾ ಗುರು ಪೀಠದ ಸರ್ದಾರ್ ಸೇವಾ ಲಾಲಾ ಸ್ವಾಮೀಜಿ, ಭಾಯಾಗಡ ಗುರು ಪೀಠದ ಗಣಪತಿ ಮಹಾರಾಜ್, ಆಂಧ್ರಪ್ರದೇಶದ ರಮೇಶ್ ಮಹಾರಾಜ್, ಎಸ್.ಎನ್ ಕೃಷ್ಣನಾಯಕ್, ಅಶೋಕ್ ರಾಥೋಡ್, ದಾಡಿ ಕೃಷ್ಣ ನಾಯಕ್, ಭಗವತ್ ವೇಣುಗೋಪಾಲ್ ನಾಯಕ್, ಟಿ.ಎ.ಬಿ.ಸಿ.ಎಂ.ಎಸ್ ಮಾಜಿ ಅಧ್ಯಕ್ಷ ಟಿ.ನಾರಾಯಣಪ್ಪ, ಮಾಜಿ ಚೇರ್ಮನ್ ಸಿ.ಎನ್.ಮೂರ್ತಿ ಭಾಗವಹಿಸಿದ್ದರು.

ನಾಗದೇವನ ಹಳ್ಳಿಯ ಆರ್.ಆರ್.ಬಡಾವಣೆಯ ವೀರಾಂಜನೇಯ ದೇವಸ್ಥಾನದಲ್ಲಿಯೂ ವಿಶೇಷ ಪೂಜೆ ನಡೆಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.