ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ಈ ತಿಂಗಳ ಕೊನೆಯಲ್ಲಿ ಐದು ಹೊಸ ಮಾರ್ಗಗಳಿಗೆ ವಿಮಾನಯಾನ ಸೇವೆ ಆರಂಭವಾಗಲಿದೆ. ದೇಶದಲ್ಲಿನ ಎರಡನೇ ಹಂತದ ನಗರಗಳಿಗೂ ಸಂಪರ್ಕ ಸಾಧ್ಯವಾಗಲಿದೆ.
ಆಗ್ರಾ, ಕರ್ನೂಲು, ರಾಜಕೋಟ್, ದುರ್ಗಾಪುರ ಮತ್ತು ದಿಬ್ರುಗಡಕ್ಕೆ ಹೊಸದಾಗಿ ವಿಮಾನಗಳು ಸಂಚರಿಸಲಿವೆ. ರಾಜಕೋಟ್, ದುರ್ಗಾಪುರಕ್ಕೆ ಸ್ಪೈಸ್ಜೆಟ್ ಮತ್ತು ದಿಬ್ರುಗಡಕ್ಕೆ ಇಂಡಿಗೊ ವಿಮಾನಗಳು ಈ ತಿಂಗಳ ಕೊನೆಯಲ್ಲಿ ಸಂಚಾರ ಆರಂಭಿಸಲಿವೆ. ಆಗ್ರಾ ಮತ್ತು ಕರ್ನೂಲ್ಗೆ ಮಾರ್ಚ್ ಮೊದಲ ವಾರದಿಂದ ವಿಮಾನ ಸೇವೆ ಲಭ್ಯವಾಗಲಿದೆ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ (ಬಿಐಎಎಲ್) ಹೇಳಿದೆ. ಆ ಮೂಲಕ, ನಗರದಿಂದ ದೇಶದ 61 ಸ್ಥಳಗಳಿಗೆ ವಿಮಾನಯಾನ ಸೇವೆ ಸಿಕ್ಕಂತಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.