ಬೆಂಗಳೂರು: ಭೂಗತ ಕೇಬಲ್ ಅಳವಡಿಕೆ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ಕೆಲವೆಡೆ ಆ.12 ಮತ್ತು 13ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ರಾಜರಾಜೇಶ್ವರಿ ನಗರದ ರಂಗನಾಥ ಕಾಲೊನಿ, ಸಿ.ಎನ್. ಪಾಳ್ಯದ ಸರ್ಕಾರಿ ಶಾಲೆ ಸುತ್ತಮುತ್ತ, ಟಿ.ಜಿ ಪಾಳ್ಯ, ದುಬಾಸಿಪಾಳ್ಯ, ಟೆಲಿಕಾಂ ಲೇಔಟ್, ಮಾರುತಿನಗರದಲ್ಲಿ ಆ.12ರಂದು ವ್ಯತ್ಯಯವಾಗಲಿದೆ. ಆ.13ರಂದು ಹೊಸಕೆರೆಹಳ್ಳಿ, ಬಿಇಎಂಎಲ್ ರಸ್ತೆ, ಸುವರ್ಣನಗರ, ಕೆ.ಎಚ್.ಬಿ. ಪ್ಲಾಟೀನಂ, ಸರ್ ಎಂ.ವಿ. ಲೇಔಟ್, ದೊಡ್ಡಬಸ್ತಿಯಲ್ಲಿ ವ್ಯತ್ಯಯವಾಗಲಿದೆ.
ಇನ್ನೊಂದೆಡೆ ತುರ್ತು ನಿರ್ವಹಣಾ ಕಾರ್ಯ ನಿಮಿತ್ತ ಆ.13ರಂದು ಸೆಸ್ನಾ ಗಾರ್ಡನ್, ಹೊರ ವರ್ತುಲ ರಸ್ತೆ, ಸೆಂಟ್ರಲ್ ಮಾಲ್, ಶೋಭಾ ಅಪಾರ್ಟ್ಮೆಂಟ್, ತಕ್ಷಶಿಲಾ ಹೆಲ್ತ್ ಕೇರ್, ಸರ್ಜಾಪುರ ರಸ್ತೆ, ಇಬ್ಬಲೂರು, ಬೆಳ್ಳಂದೂರು, ಅಂಬಲೀಪುರ, ಹರಳೂರು ರಸ್ತೆ, ಕಸವನಹಳ್ಳಿ, ಕೈಕೊಂಡ್ರಹಳ್ಳಿ, ಜುನ್ನಸಂದ್ರ, ಹಾಲನಾಯಕನಹಳ್ಳಿ ಸುತ್ತಮುತ್ತಲ ವಿದ್ಯುತ್ ವ್ಯತ್ಯಾಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.