ADVERTISEMENT

ಹಬ್ಬದ ಕಸಕ್ಕೆ ಬೆಂಕಿ; ಸುಟ್ಟ ಬೈಕ್

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 20:00 IST
Last Updated 16 ಜನವರಿ 2020, 20:00 IST

ಬೆಂಗಳೂರು: ಕಾಟನ್‌ಪೇಟೆ ಠಾಣೆ ವ್ಯಾಪ್ತಿಯಲ್ಲಿ ಕಸದ ರಾಶಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಇದರಿಂದಾಗಿ ಬೈಕ್‌ ಸುಟ್ಟಿದೆ.

‘ಪ್ರಾಥಮಿಕ ಸರ್ಕಾರಿ ಶಾಲೆ ಸಮೀಪದ ಎಸ್‌.ಕೆ. ಎಂಜಿನಿಯರ್ ವರ್ಕ್ಸ್‌ ಮಳಿಗೆ ಸಮೀಪದಲ್ಲೇ ಕಸದ ರಾಶಿ ಇತ್ತು. ಸಂಕ್ರಾಂತಿ ಹಬ್ಬಕ್ಕೆ ಬಳಸಿದ್ದ ವಸ್ತುಗಳ ತ್ಯಾಜ್ಯವೆಲ್ಲ ರಾಶಿಯಲ್ಲಿತ್ತು. ತಡರಾತ್ರಿ ರಾಶಿಗೆ ಯಾರೋ ಬೆಂಕಿ ಹಚ್ಚಿದ್ದಾರೆ. ಬೆಂಕಿ ಕೆನ್ನಾಲಗೆ ಹೆಚ್ಚಾಗಿ ಅಕ್ಕ–ಪಕ್ಕದ ಜಾಗಕ್ಕೂ ವ್ಯಾಪಿಸುತ್ತಿತ್ತು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಅವಘಡ ತಪ್ಪಿಸಿದರು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT