ADVERTISEMENT

ಲಂಚ: ಬಿಬಿಎಂಪಿ ಕಂದಾಯ ನಿರೀಕ್ಷಕ ಬಂಧನ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 3:59 IST
Last Updated 6 ಜನವರಿ 2022, 3:59 IST
   

ಬೆಂಗಳೂರು: ಪರಪ್ಪನ ಅಗ್ರಹಾರ ಗ್ರಾಮದ ನಿವಾಸಿಯೊಬ್ಬರು ಖರೀದಿಸಿದ್ದ ಫ್ಲ್ಯಾಟ್‌ ಒಂದಕ್ಕೆ ಖಾತಾ ಸಂಖ್ಯೆ ನೀಡಲು ₹ 4,000 ಲಂಚ ಪಡೆದ ಬಿಬಿಎಂಪಿ ಕೂಡ್ಲು ವಾರ್ಡ್‌ ಕಂದಾಯ ನಿರೀಕ್ಷಕ ಗಿರೀಶ್‌ ಎಂಬುವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬುಧವಾರ ಬಂಧಿಸಿದೆ.

ಫ್ಲ್ಯಾಟ್‌ ಖರೀದಿದಾರರು ಖಾತೆ ಸಂಖ್ಯೆ ನೀಡುವಂತೆ ಕೋರಿ ವಾರ್ಡ್‌ ಸಂಖ್ಯೆ 191ರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಖಾತೆ ನೀಡಲು ₹ 4,000 ಲಂಚ ನೀಡುವಂತೆ ಕಂದಾಯ ನಿರೀಕ್ಷಕ ಬೇಡಿಕೆ ಇಟ್ಟಿದ್ದರು. ಈ ಕುರಿತು ಅರ್ಜಿದಾರರು ಎಸಿಬಿ ಬೆಂಗಳೂರು ನಗರ ಘಟಕಕ್ಕೆ ದೂರು ನೀಡಿದ್ದರು.

ಬುಧವಾರ ಅರ್ಜಿದಾರರಿಂದ ಲಂಚ ಪಡೆಯುತ್ತಿದ್ದಾಗಲೇ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ಗಿರೀಶ್‌ ಅವರನ್ನು ಬಂಧಿಸಿದ್ದಾರೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.