ಬೆಂಗಳೂರು: ವಿದ್ಯಾರ್ಥಿಗಳು ಹಾಗೂ ಕೊಳೆಗೇರಿ ಯುವಕರಿಗೆ ಗಾಂಜಾ ಮಾರುತ್ತಿದ್ದ ಐವರಿಕೋಸ್ಟ್ನ ಟೌರಿ ಮುಸ್ತಾಫಾ (44) ಎಂಬಾತನನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ₹ 15 ಲಕ್ಷ ಮೌಲ್ಯದ 32 ಕೆ.ಜಿ.ಗಾಂಜಾ ಜಪ್ತಿ ಮಾಡಿದ್ದಾರೆ.
ವ್ಯಾಪಾರದ ಉದ್ದೇಶದಡಿ ವೀಸಾ ಪಡೆದು 2015ರಲ್ಲಿ ದೇಶಕ್ಕೆ ಬಂದಿದ್ದ ಆರೋಪಿ, ಪತ್ನಿ ಜತೆ ಹೆಣ್ಣೂರಿನ ಚಿಕ್ಕಣ್ಣಲೇಔಟ್ನಲ್ಲಿ ನೆಲೆಸಿದ್ದ. ಮಾದಕ ದ್ರವ್ಯ ನಿಗ್ರಹ ದಳದ ಎಸಿಪಿ ಶೋಭಾ ಎಸ್.ಕಟಾವ್ಕರ್ ನೇತೃತ್ವದ ತಂಡ ಗುರುವಾರ ಮಧ್ಯಾಹ್ನ ನಡೆಸಿದ ದಾಳಿವೇಳೆ ಇಬ್ಬರು ಏಜೆಂಟ್ಗಳು ತಪ್ಪಿಸಿಕೊಂಡರೆ, ಮುಸ್ತಾಫಾಸಿಕ್ಕಿಬಿದ್ದಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.