ADVERTISEMENT

ಆವರಣ ಗೋಡೆಗೆ ಕಾರು ಡಿಕ್ಕಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 20:24 IST
Last Updated 8 ಜೂನ್ 2022, 20:24 IST

ಬೆಂಗಳೂರು: ಕಿಮ್ಸ್‌ನ ವೈದ್ಯಕೀಯ ವಿದ್ಯಾರ್ಥಿ ಅತೀವೇಗವಾಗಿ ಕಾರು ಚಾಲನೆ ಮಾಡಿ ರಾಜಭವನ ಸಮೀಪ ಪ್ರಸಾರ ಭಾರತಿ (ಆಕಾಶವಾಣಿ) ಕೇಂದ್ರದ ಆವರಣ ಗೋಡೆಗೆ ಡಿಕ್ಕಿ ಹೊಡೆದಿರುವ ಘಟನೆ ಕಬ್ಬನ್ ಪಾರ್ಕ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆ ಸಂಬಂಧ ಮಲ್ಲೇಶ್ವರ ನಿವಾಸಿ ಶ್ರೀವತ್ಸ (22) ಎಂಬಾತನನ್ನು ವಿಚಾರಣೆ ನಡೆಸಿ, ನೋಟಿಸ್ ಕೊಟ್ಟು ಕಳುಹಿಸಲಾಗಿದೆ.‌ ಕಾರಿನ ಏರ್‌ ಬ್ಯಾಗ್‌ ತೆರೆದುಕೊಂಡ ಕಾರಣ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾನೆ.

ಮಂಗಳವಾರ ರಾತ್ರಿ ಸ್ನೇಹಿತರ ಜತೆ ಮದ್ಯದ ಪಾರ್ಟಿ ಮಾಡಿದ್ದ ಶ್ರೀವತ್ಸ, ಒಬ್ಬನೇ ಕಾರು ಚಾಲನೆ ಮಾಡಿಕೊಂಡು ಬಂದಿದ್ದಾನೆ. ಅರಮನೆ ರಸ್ತೆಯಿಂದ ಬರುವಾಗ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.