ಬೆಂಗಳೂರು: ಶ್ರೀರಾಮಸೇವಾ ಮಂಡಳಿ ರಾಮನವಮಿ ಸೆಲೆಬ್ರೇಷನ್ ಟ್ರಸ್ಟ್ ಏಪ್ರಿಲ್ 6ರಿಂದ ಮೇ 2ರವರೆಗೆ ಚಾಮರಾಜಪೇಟೆಯ ಕೋಟೆ ಪ್ರೌಢಶಾಲೆ ಆವರಣದಲ್ಲಿ ‘87ನೇ ಶ್ರೀ ರಾಮನವಮಿ ಸಂಗೀತೋತ್ಸವ’ ಹಮ್ಮಿಕೊಂಡಿದೆ.
ತಿಂಗಳು ಪೂರ್ತಿ ನಡೆಯುವ ಈ ಸಂಗೀತೋತ್ಸವದಲ್ಲಿ ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕರು, ವೀಣೆ, ಪಿಟೀಲು, ಕೊಳಲು ಸೇರಿ ವಿವಿಧ ವಾದ್ಯಗಳ ವಾದಕರು ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ. ಏ.6ರ ಬೆಳಿಗ್ಗೆ 8.30ರಿಂದ ರಾಮನವಮಿ ಮಹಾ ಅಭಿಷೇಕ ನಡೆಯಲಿದೆ. ಮಲ್ಲಾಡಿ ಸಹೋದರರು ವಿಶೇಷ ಸಂಗೀತ ಸೇವೆ ಸಲ್ಲಿಸಲಿದ್ದಾರೆ. ಸಂಜೆ 5.45ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ.
ಒಂದು ತಿಂಗಳ ಸಂಗೀತೋತ್ಸವದಲ್ಲಿ ಜಯತೀರ್ಥ ಮೇವುಂಡಿ, ತ್ರಿಚೂರ್ ಸಹೋದರರು, ವಿದ್ಯಾಭೂಷಣ, ರಂಜನಿ ಮತ್ತು ಗಾಯತ್ರಿ, ಪ್ರವೀಣ್ ಗೋಡ್ಖಿಂಡಿ, ಅಭಿಷೇಕ್ ರಘುರಾಂ, ವೆಂಕಟೇಶ್ ಕುಮಾರ್, ಶಾಹಿದ್ ಪರ್ವಿಜ್, ಸುಮಾ ಸುಧೀಂದ್ರ, ಎಸ್. ಸಾಕೇತರಾಮನ್, ಮೈಸೂರು ನಾಗರಾಜ್ ಮತ್ತು ಮೈಸೂರು ಮಂಜುನಾಥ್ ಸೇರಿ ಸಂಗೀತ ಕ್ಷೇತ್ರದ ಪ್ರಮುಖ ಗಾಯಕರು ಹಾಗೂ ಕಲಾವಿದರು ಕಛೇರಿ ನಡೆಸಿಕೊಡಲಿದ್ದಾರೆ.
www.ramanavamitickets.com ವೆಬ್ಸೈಟ್ ಮೂಲಕ ಟಿಕೆಟ್ಗಳನ್ನು ಕಾಯ್ದಿರಿಸಬಹುದು. ವಿವರಕ್ಕೆ 9448079079 ಅಥವಾ 9483518012ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.