ADVERTISEMENT

ಮೂವರಿಗೆ ಚಿದಾನಂದ ಪ್ರಶಸ್ತಿ

ಪ್ರಜಾವಾಣಿ ಚಿತ್ರ
Published 28 ಏಪ್ರಿಲ್ 2022, 19:33 IST
Last Updated 28 ಏಪ್ರಿಲ್ 2022, 19:33 IST
ಟಿ.ಎನ್‌.ನಾಗರತ್ನ
ಟಿ.ಎನ್‌.ನಾಗರತ್ನ   

ಬೆಂಗಳೂರು: ನಗರದ ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿ ವತಿಯಿಂದ ನೀಡಲಾಗುವ ‘ಚಿದಾನಂದ ಪ್ರಶಸ್ತಿ’ಗೆ ಮೈಸೂರಿನ ಎಂ.ಎಸ್.ಕೃಷ್ಣಮೂರ್ತಿ (2020), ಟಿ.ಎನ್‌.ನಾಗರತ್ನ (2021) ಹಾಗೂ ಬಿ.ಎಸ್.
ಪ್ರಣತಾರ್ತಿಹರನ್ (2022) ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ತಲಾ ₹10 ಸಾವಿರ ನಗದು, ಸ್ಮರಣಿಕೆ ಒಳಗೊಂಡಿವೆ. ಕೋವಿಡ್‌ ಕಾರಣದಿಂದ ಎರಡು ವರ್ಷ ಪ್ರಶಸ್ತಿ ಪ್ರದಾನ ನಡೆದಿರಲಿಲ್ಲ. ಮೂರು ವರ್ಷದ ಪ್ರಶಸ್ತಿಗಳನ್ನು ಒಂದೇ
ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು.

ಮೇ 15ರಂದು ಮೈಸೂರಿನ ಜೆಎಸ್‌ಎಸ್‌ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣ ದಲ್ಲಿ ನಡೆಯಲಿರುವ ಕಾರ್ಯಕ್ರಮ ದಲ್ಲಿ ವಿದ್ವಾಂಸ ಟಿ.ವಿ.ವೆಂಕಟಾಚಲ ಶಾಸ್ತ್ರೀ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.