ADVERTISEMENT

ಸಿಎಂಆರ್‌ ವಿ.ವಿ: ಬಿ.ಟೆಕ್ ಕಾರ್ಯಕ್ರಮ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 19:54 IST
Last Updated 15 ಆಗಸ್ಟ್ 2019, 19:54 IST
ಕಾರ್ಯಕ್ರಮವನ್ನು ಡಾ.ಆರ್.ರವಿಕುಮಾರ್ ಉದ್ಘಾಟಿಸಿದರು. ಸಿಎಂಆರ್ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಎಸ್.ಶಿವಕುಮಾರ್, ಡೀನ್ ಡಾ.ಎಂ.ಕೆ.ನಾಗರಾಜ್, ಕುಲಸಚಿವ ಡಾ.ಆರ್.ಪ್ರವೀಣ್, ಪ್ರಾಧ್ಯಾಪಕ ಡಾ‌.ರಾಜಶೇಖರ್ ಪಾಟೀಲ ಇದ್ದರು.
ಕಾರ್ಯಕ್ರಮವನ್ನು ಡಾ.ಆರ್.ರವಿಕುಮಾರ್ ಉದ್ಘಾಟಿಸಿದರು. ಸಿಎಂಆರ್ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಎಸ್.ಶಿವಕುಮಾರ್, ಡೀನ್ ಡಾ.ಎಂ.ಕೆ.ನಾಗರಾಜ್, ಕುಲಸಚಿವ ಡಾ.ಆರ್.ಪ್ರವೀಣ್, ಪ್ರಾಧ್ಯಾಪಕ ಡಾ‌.ರಾಜಶೇಖರ್ ಪಾಟೀಲ ಇದ್ದರು.   

ಕೆ.ಆರ್.ಪುರ: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಾಧನೆ ಮೆಟ್ಟಿಲು ಹತ್ತಲು ಶ್ರಮ ಮುಖ್ಯವಾಗುತ್ತದೆ ಎಂದು ಬೆಂಗಳೂರು ಐಐಎಂನ ನಿವೃತ್ತ ಪ್ರಾಧ್ಯಾಪಕ ಡಾ.ಆರ್.ರವಿಕುಮಾರ್ ತಿಳಿಸಿದರು.

ಹೆಣ್ಣೂರು ಸಮೀಪದ ಚಗಲಟ್ಟಿಯ ಸಿಎಂಆರ್ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಬಿ.ಟೆಕ್ ವಿದ್ಯಾರ್ಥಿಗಳ ನೂತನ ತರಗತಿ ಹಾಗೂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ನಾಲ್ಕು ವರ್ಷಗಳ ಎಂಜಿನಿಯರಿಂಗ್ ಕೋರ್ಸ್‌ ವಿದ್ಯಾರ್ಥಿಗಳ ಜೀವನದ ದಿಕ್ಕನ್ನು ಬದಲಿಸಬಹುದು. ಯಾವುದೇ ವಿಷಯವಾಗಿರಲಿ ನಾವು ಮಾಡುವ ಕೆಲಸದಲ್ಲಿ ಪ್ರಾಧ್ಯಾಪಕರ ಸಲಹೆ ಸೂಚನೆಗಳು ಮುಖ್ಯವಾಗುತ್ತವೆ. ಹೊಸದನ್ನು ಶೋಧಿಸುವ ಕೆಲಸವನ್ನು ವಿದ್ಯಾರ್ಥಿಗಳ ಮಾಡಬೇಕು’ ಎಂದರು.

ADVERTISEMENT

ಸಿಎಂಆರ್ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಎಸ್.ಶಿವಕುಮಾರ್, ‘ಎಂಜಿನಿಯರಿಂಗ್ ತರಗತಿಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಉತ್ತಮ ತಂತ್ರಜ್ಞಾನ ಹೊಂದಿದ ಪ್ರಯೋಗಾಲಯಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.