ಬೆಂಗಳೂರು:ಕೊರೊನಾ ಸೋಂಕು ತಗುಲಿದ್ದ ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್) ಎಎಸ್ಐಯೊಬ್ಬರು ಸಾವನ್ನಪ್ಪಿದ್ದಾರೆ.
ಅನಾರೋಗ್ಯದಿಂದ ಎಎಸ್ಐ ಬಳಲುತ್ತಿದ್ದರು. ಪರೀಕ್ಷೆ ಮಾಡಿಸಿದಾಗ ಕೊರೊನಾ ದೃಢಪಟ್ಟಿತ್ತು.
ಅಗ್ನಿಶಾಮಕ ದಳದ 8 ಸಿಬ್ಬಂದಿಗೆ ಕೊರೊನಾ
ಬೆಂಗಳೂರುನಗರದ ಅಗ್ನಿಶಾಮಕ ದಳದ 8 ಸಿಬ್ಬಂದಿಯಲ್ಲಿ ಮಂಗಳವಾರ ಕೊರೊನಾ ದೃಢಪಟ್ಟಿದೆ.
ದಕ್ಷಿಣ ವಿಭಾಗದ 6 ಹಾಗೂ ಜಯನಗರದ ಅಗ್ನಿಶಾಮಕ ದಳದ ಕಚೇರಿಯ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಸಿಬ್ಬಂದಿಯೊಬ್ಬರ ಪತ್ನಿಗೂ ಸೋಂಕು ತಗುಲಿರುವುದು ವರದಿಯಿಂದ ಗೊತ್ತಾಗಿದೆ.
ರಾಜಾಜಿನಗರದ ಅಗ್ನಿಶಾಮಕ ದಳದ ವಸತಿಗೃಹದಲ್ಲಿದ್ದ ಬಹುತೇಕ ಸಿಬ್ಬಂದಿ ವಾಸವಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.