ADVERTISEMENT

ಸಿಆರ್‌ಐ ಪಂಪ್ಸ್‌ನಿಂದ ಕೇರಳಕ್ಕೆ ₹10 ಲಕ್ಷ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2018, 19:50 IST
Last Updated 20 ಸೆಪ್ಟೆಂಬರ್ 2018, 19:50 IST
ಸಿಆರ್‌ಐ ಪಂಪ್ಸ್‌ನ ಮಾರ್ಕೆಟಿಂಗ್‌ ವಿಭಾಗದ ಸಿ.ಕುಮಾರ್‌ ಅವರು ಕೇರಳದ ಸಚಿವ ಇ.ಪಿ ಜಯರಾಜನ್‌ ಅವರಿಗೆ ಚೆಕ್‌ ಹಸ್ತಾಂತರಿಸಿದರು
ಸಿಆರ್‌ಐ ಪಂಪ್ಸ್‌ನ ಮಾರ್ಕೆಟಿಂಗ್‌ ವಿಭಾಗದ ಸಿ.ಕುಮಾರ್‌ ಅವರು ಕೇರಳದ ಸಚಿವ ಇ.ಪಿ ಜಯರಾಜನ್‌ ಅವರಿಗೆ ಚೆಕ್‌ ಹಸ್ತಾಂತರಿಸಿದರು   

ಬೆಂಗಳೂರು: ಕೇರಳದ ಪ್ರವಾಹ ಸಂತ್ರಸ್ತರ ನೆರವಿಗಾಗಿ ಸಿಆರ್‌ಐ ಪಂಪ್ಸ್‌ ಸಂಸ್ಥೆ ₹10 ಲಕ್ಷ ದೇಣಿಗೆ ನೀಡಿದೆ.

ಕೇರಳದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ನೀಡಲಾಗಿದೆ. ಅಲ್ಲದೇ ನೀರನ್ನು ಹೊರಹಾಕಿ ಹಾಗೂ ಸ್ವಚ್ಛತೆಯನ್ನು ಕಾಪಾಡಲು 60ರಿಂದ 70 ತಂತ್ರಜ್ಞರ ವಿಶೇಷ ತಂಡವನ್ನು ಕಳಿಸಲಾಗಿತ್ತು. ಪಂಪ್‌ಗಳನ್ನು ರಿಪೇರಿ ಮಾಡುವ ಕೆಲಸಗಳನ್ನೂ ಸಂಸ್ಥೆಯ ವತಿಯಿಂದ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT