ADVERTISEMENT

ಗ್ಯಾಸ್ ಕಟ್ಟರ್ ನಿಂದ ಎಟಿಎಂ ಕಳ್ಳತನ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 21:09 IST
Last Updated 26 ಆಗಸ್ಟ್ 2020, 21:09 IST
ಬಂಧಿತರು
ಬಂಧಿತರು   

ಬೆಂಗಳೂರು: ಎಟಿಎಂ ಯಂತ್ರದಿಂದ ಗ್ಯಾಸ್ ಕಟ್ಟರ್ ಮೂಲಕ ಹಣ ದೋಚಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಸಮರ್ ಜೋತ್ ಸಿಂಗ್ (33), ಎ.ವಿ.ಜಾಫರ್ (30), ಯಹ್‍ಯಾ (27) ಬಂಧಿತರು.

ಆ.10ರ ರಾತ್ರಿ ಜಾಲಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗ್ಯಾಸ್ ಕಟ್ಟರ್ ಬಳಸಿ ಕೆನರಾ ಬ್ಯಾಂಕ್ ಎಟಿಎಂನಿಂದ ₹27.82 ಲಕ್ಷ ಹಣ ದೋಚಿದ್ದರು.ಈ ಬಗ್ಗೆ ಎಟಿಎಂ ನಿರ್ವಹಣೆ ಮಾಡುತ್ತಿದ್ದ ಮಂಜುನಾಥ್ ಪೊಲೀಸರು ದೂರು ನೀಡಿದ್ದರು.

ADVERTISEMENT

ಕಳ್ಳತನಕ್ಕೂ ಮುನ್ನ ಆರೋಪಿಗಳು ಎಟಿಎಂನಿಂದ ಹಣ ತೆಗೆದುಕೊಳ್ಳುವ ನಾಟಕವಾಡಿದ್ದರು. ಅಲ್ಲಿನ ಚಲನವಲನಗಳನ್ನು ವೀಕ್ಷಿಸಿ, ವಾರಾಂತ್ಯದಲ್ಲಿ ಜನರು ಓಡಾಟ ಇಲ್ಲದ ಸಮಯದಲ್ಲಿ ಕಳ್ಳತನ ಮಾಡಿದ್ದಾರೆ. ಆರೋಪಿಗಳ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.

ಆರೋಪಿಗಳಿಂದ ₹17.34 ಲಕ್ಷ ನಗದು, ಕಳವು ಮಾಡಿರುವ ಕಾರು, ಎರಡು ದ್ವಿಚಕ್ರ ವಾಹನ, ಐಫೋನ್, ಕೃತ್ಯಕ್ಕೆ ಬಳಸುತ್ತಿದ್ದ ಗ್ಯಾಸ್ ಕಟ್ಟರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.