ADVERTISEMENT

ಬೈಕ್ ಕದ್ದಿದ್ದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2020, 20:56 IST
Last Updated 2 ಸೆಪ್ಟೆಂಬರ್ 2020, 20:56 IST
ಆರೋಪಿ ವಿನಾಯಕ
ಆರೋಪಿ ವಿನಾಯಕ   

ಬೆಂಗಳೂರು: ನಗರದ ವಿವಿಧ ಭಾಗಗಳಲ್ಲಿ ಬೈಕ್‍ಗಳನ್ನು ಕದ್ದಿದ್ದ ಆರೋಪಿಯನ್ನು ಬಸವೇಶ್ವರ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕುರುಬರಹಳ್ಳಿಯ ಕಾವೇರಿ ನಗರದ ನಿವಾಸಿ ವಿನಾಯಕ (21) ಬಂಧಿತ ಆರೋಪಿ. ಆ.8ರಂದು ಬಸವೇಶ್ವರ ನಗರದಲ್ಲಿ ಬೈಕ್ ಕಳವು ಆಗಿರುವುದಾಗಿ ದೂರು ದಾಖಲಾಗಿತ್ತು.

ಬಸವೇಶ್ವರನಗರ, ಪೀಣ್ಯ, ಮಹಾಲಕ್ಷ್ಮೀ ಬಡಾವಣೆ, ಬ್ಯಾಟರಾಯನಪುರ, ಅನ್ನಪೂರ್ಣೇಶ್ವರಿ ನಗರ, ವಿಜಯನಗರ ಹಾಗೂ ಕಾಮಾಕ್ಷಿಪಾಳ್ಯ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ₹3 ಲಕ್ಷ ಮೌಲ್ಯದ 9 ಬೈಕ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.