ADVERTISEMENT

ಬಾರ್‌ನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 18:28 IST
Last Updated 20 ಜನವರಿ 2021, 18:28 IST

ಬೆಂಗಳೂರು: ಬಾರ್‌ವೊಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಸಂಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನಕಝಿನ್ಸ್ ಹುಕ್ಕಾ ಬಾರ್‌ಗೆ ಕಳೆದ ಶನಿವಾರ (ಜ.16) ಬಂದಿದ್ದ ದೊಮ್ಮಸಂದ್ರ ಹಾಗೂ ಎಂ.ಎಸ್.ರಾಮಯ್ಯ ಬಡಾವಣೆ ಯುವಕರ ಗುಂಪುಗಳ ನಡುವೆ ಮಾರಾಮರಿ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ಗಲಾಟೆ ಶುರುವಾಗಿದ್ದು, ಬಳಿಕೆ ಎರಡೂ ಗುಂಪಿನ ಯುವಕರು ಕೈಕೈ ಮಿಲಾಯಿಸಿದ್ದಾರೆ.ಬಾರ್‌ನಿಂದ ಹೊರಬಂದು ಹೊಡೆದಾಡಿಕೊಂಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ADVERTISEMENT

ಎರಡೂ ತಂಡಗಳಲ್ಲಿ ಸುಮಾರು 20 ಮಂದಿ ಯುವಕರಿದ್ದರು. ಒಂದು ತಂಡದಲ್ಲಿ ಯುವತಿಯೂ ಇದ್ದರು. ಅವರು ಗಲಾಟೆ ವೇಳೆ ದಿಕ್ಕು ತೋಚದಂತಾಗಿದ್ದರು. ಈ ಸಂಬಂಧ ಸಂಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.