ADVERTISEMENT

ಅರಮನೆ ಮೈದಾನ ಮಂಟಪಗಳ ಹೆಸರಿನಲ್ಲಿ ₹ 30 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 21:50 IST
Last Updated 18 ಜೂನ್ 2020, 21:50 IST

ಬೆಂಗಳೂರು: ‘ಅರಮನೆ ಮೈದಾನದಲ್ಲಿರುವ ‘ಕಿಂಗ್‌ ಕೋರ್ಟ್’ ಮತ್ತು ‘ನಲಪಾಡ್’ ಕಲ್ಯಾಣ ಮಂಟಪಗಳನ್ನು ಕಡಿಮೆ ದರದಲ್ಲಿ ಭೋಗ್ಯಕ್ಕೆ ಕೊಡಿಸುವುದಾಗಿ ನಂಬಿಸಿದ್ದ ಮಹದೇವ್ ರಾಜ್ ಎಂಬುವರು ₹ 30 ಲಕ್ಷ ಪಡೆದುಕೊಂಡು ವಂಚಿಸಿದ್ದಾರೆ’ ಎಂದು ಆರೋಪಿಸಿ ತೇಜ್‌ಸಿಂಗ್ ಎಂಬುವರು ರಾಮಮೂರ್ತಿ ನಗರ ಠಾಣೆಗೆ ದೂರು ನೀಡಿದ್ದಾರೆ.

‘ವಿದ್ಯಾರಣ್ಯಪುರ ನಿವಾಸಿಯಾದ ಗುತ್ತಿಗೆದಾರ ತೇಜಸಿಂಗ್ ನೀಡಿರುವ ದೂರು ಆಧರಿಸಿ ಮಹದೇವ ರಾಜ್ ವಿರುದ್ಧ ಎಫ್ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT