ADVERTISEMENT

ಅರಮನೆ ಮೈದಾನ ಮಂಟಪಗಳ ಹೆಸರಿನಲ್ಲಿ ₹ 30 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 21:50 IST
Last Updated 18 ಜೂನ್ 2020, 21:50 IST

ಬೆಂಗಳೂರು: ‘ಅರಮನೆ ಮೈದಾನದಲ್ಲಿರುವ ‘ಕಿಂಗ್‌ ಕೋರ್ಟ್’ ಮತ್ತು ‘ನಲಪಾಡ್’ ಕಲ್ಯಾಣ ಮಂಟಪಗಳನ್ನು ಕಡಿಮೆ ದರದಲ್ಲಿ ಭೋಗ್ಯಕ್ಕೆ ಕೊಡಿಸುವುದಾಗಿ ನಂಬಿಸಿದ್ದ ಮಹದೇವ್ ರಾಜ್ ಎಂಬುವರು ₹ 30 ಲಕ್ಷ ಪಡೆದುಕೊಂಡು ವಂಚಿಸಿದ್ದಾರೆ’ ಎಂದು ಆರೋಪಿಸಿ ತೇಜ್‌ಸಿಂಗ್ ಎಂಬುವರು ರಾಮಮೂರ್ತಿ ನಗರ ಠಾಣೆಗೆ ದೂರು ನೀಡಿದ್ದಾರೆ.

‘ವಿದ್ಯಾರಣ್ಯಪುರ ನಿವಾಸಿಯಾದ ಗುತ್ತಿಗೆದಾರ ತೇಜಸಿಂಗ್ ನೀಡಿರುವ ದೂರು ಆಧರಿಸಿ ಮಹದೇವ ರಾಜ್ ವಿರುದ್ಧ ಎಫ್ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT