ಬೆಂಗಳೂರು: ಚಿನ್ನದಂಗಡಿಯ ಮಾಲೀಕನನ್ನು ವಂಚಿಸಿ 68 ಗ್ರಾಂ ಚಿನ್ನದ ಗಟ್ಟಿ ಸಹಿತ ಅಲ್ಲಿ ಕೆಲಸ ಮಾಡುತ್ತಿದ್ದ ಯುವಕ ಪರಾರಿಯಾದ ಘಟನೆ ಅಂಚೆಪೇಟೆ ಅವೆನ್ಯೂ ರಸ್ತೆಯಲ್ಲಿ ನಡೆದಿದೆ.
ಅಶೋಕ್ ವೈಷ್ಣವ್ ವಂಚನೆಗೊಳಗಾದವರು. ಅವರು ನೀಡಿರುವ ದೂರಿನ ಅನ್ವಯ ಪಶ್ಚಿಮ ಬಂಗಾಳದ ಬಿಸ್ವಾಥ್ ರಾಯ್ (25) ಎಂಬಾತನ ವಿರುದ್ಧ ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಒಂದು ವರ್ಷದಿಂದ ಅಶೋಕ್ ಅಂಗಡಿಯಲ್ಲಿ ಬಿಸ್ವಾಥ್ ರಾಯ್ ಚಿನ್ನದ ಆಭರಣ ತಯಾರಿಸುವ ಕೆಲಸ ಮಾಡುತ್ತಿದ್ದ. ಚಿನ್ನದ ಸರ ಮಾಡಿಕೊಡುವಂತೆ ಅಶೋಕ್ ಅವರು ಮೇ 9ರಂದು ಬೆಳಿಗ್ಗೆ 11 ಗಂಟೆಗೆ 68 ಗ್ರಾಂ ಚಿನ್ನದ ಗಟ್ಟಿಯನ್ನು ಬಿಸ್ವಾಥ್ಗೆ ನೀಡಿದ್ದರು. ಆದರೆ, 11ರಂದು ಆತ ಸಂಪರ್ಕಕ್ಕೆ ಸಿಗದಿದ್ದಾಗ, ಪರಾರಿಯಾಗಿರುವುದು ಗೊತ್ತಾಗಿ ದೂರು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.