ADVERTISEMENT

ದಾಬಸ್‌ಪೇಟೆ: ನಿರ್ಗತಿಕರಿಗೆ ಮಾಸಾಶನ ವಿತರಣೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 7:28 IST
Last Updated 13 ಜುಲೈ 2021, 7:28 IST
ನಿರ್ಗತಕರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಮಾಸಾಶನ ವಿತರಿಸಲಾಯಿತು
ನಿರ್ಗತಕರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಮಾಸಾಶನ ವಿತರಿಸಲಾಯಿತು   

ದಾಬಸ್‌ಪೇಟೆ: ಆರ್ಥಿಕ ದುರ್ಬಲರು ಹಾಗೂ ಅಂಗವಿಕಲರಿಗೆಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಸೋಂಪುರ ಹೋಬಳಿ ನರಸೀಪುರ ಗ್ರಾಮದಲ್ಲಿ ಮಾಸಾಶನ ವಿತರಣೆ ಮಾಡಲಾಯಿತು.

ಮಾನವ ಚಾರಿಟೀಸ್‌ನ ಎಚ್.ಬಿ. ನಾಗಭೂಷಣ, ‘ಕೋವಿಡ್‌ ಬಿಕ್ಕಟ್ಟಿನಿಂದ ನಿರ್ಗತಿಕರು ಜೀವನ ನಡೆಸುವುದು ಕಷ್ಟವಾಗಿದೆ. ಅದನ್ನು ಮನಗಂಡು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ತಾಲ್ಲೂಕಿನ ಉದ್ದಕ್ಕೂ ಇರುವ ಅರ್ಹ ನಿರ್ಗತಿಕರನ್ನು ಗುರುತಿಸಿ ಜೀವನ ನಿರ್ವಹಣೆಗೆ ಮಾಸಾಶನ ನೀಡುತ್ತಿರುವುದು ಸಂತೋಷದ ಸಂಗತಿ’ ಎಂದರು.

ಸಂಸ್ಥೆಯ ಪದಾಧಿಕಾರಿಗಳಾದ ರಮೇಶ್, ಚಕ್ರವರ್ತಿ ರಘುನಂದನ್, ರಾಜಣ್ಣ, ಮಂಜುನಾಥ್ ಪ್ರಸಾದ್, ವಿನೋದ್ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.