ADVERTISEMENT

‘ದೇಶಪ್ರೇಮ ದಿವಸ್’ ಘೋಷಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 18:46 IST
Last Updated 22 ಜನವರಿ 2021, 18:46 IST
ನೇತಾಜಿ ಸುಭಾಷ್ ಚಂದ್ರ ಬೋಸ್ ಸಂಶೋಧನೆ ಮತ್ತು ಬಹು ಅಭಿವೃದ್ಧಿ ಟ್ರಸ್ಟ್ (ರಿ) ಟ್ರಸ್ಟ್‌ ನ‌ ಅಧ್ಯಕ್ಷರಾದ ಜಿ ಆರ್ ಶಿವಶಂಕರ್ , ಉಪಾಧ್ಯಕ್ಷರಾದ ಎಂ ರಾಜಕುಮಾರ, ಟ್ರಸ್ಟಿಗಳಾದ ಉಮಾ ಶೇಷಗಿರಿ, ರಾಜ ಯೋಗೀಂದ್ರ ವೀರಯ್ಯ, ಶಾಸ್ತ್ರೀ ಮಠ್ ಗುರೂಜಿ, ಗುರು ಶಾಸ್ತ್ರೀ ಮಠ್ ರವರು ಪತ್ರಿಕಾಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.
ನೇತಾಜಿ ಸುಭಾಷ್ ಚಂದ್ರ ಬೋಸ್ ಸಂಶೋಧನೆ ಮತ್ತು ಬಹು ಅಭಿವೃದ್ಧಿ ಟ್ರಸ್ಟ್ (ರಿ) ಟ್ರಸ್ಟ್‌ ನ‌ ಅಧ್ಯಕ್ಷರಾದ ಜಿ ಆರ್ ಶಿವಶಂಕರ್ , ಉಪಾಧ್ಯಕ್ಷರಾದ ಎಂ ರಾಜಕುಮಾರ, ಟ್ರಸ್ಟಿಗಳಾದ ಉಮಾ ಶೇಷಗಿರಿ, ರಾಜ ಯೋಗೀಂದ್ರ ವೀರಯ್ಯ, ಶಾಸ್ತ್ರೀ ಮಠ್ ಗುರೂಜಿ, ಗುರು ಶಾಸ್ತ್ರೀ ಮಠ್ ರವರು ಪತ್ರಿಕಾಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.   

ಬೆಂಗಳೂರು: ‘ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು (ಜ.23) ‘ದೇಶಪ್ರೇಮ ದಿವಸ್’ ಎಂದು ಘೋಷಿಸಬೇಕು‘ ಎಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಸಂಶೋಧನೆ ಮತ್ತು ಅಭಿವೃದ್ಧಿ ಟ್ರಸ್ಟ್‌ನ ಉಪಾಧ್ಯಕ್ಷ ಎಂ.ರಾಜ್‍ಕುಮಾರ್ ಒತ್ತಾಯಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ‘ಪರಾಕ್ರಮ್ ದಿವಸ್’ ಎಂದು ಆಚರಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರ ಸಮಂಜಸವಲ್ಲ’ ಎಂದರು.

‘ಗಾಂಧೀಜಿ ಅವರೇ ಬೋಸ್‍ ಅವರ ದೇಶಪ್ರೇಮವನ್ನು ಮೆಚ್ಚಿ ನೇತಾಜಿ ಎಂದು ಕರೆದಿದ್ದಾರೆ. ಅಪ್ರತಿಮ ದೇಶಾಭಿಮಾನದ ಮೂಲಕ ಅವರು ಭಾರತೀಯರ ಹೃದಯದಲ್ಲಿ ಜೀವಂತವಾಗಿದ್ದಾರೆ. ಹಾಗಾಗಿ, ಅವರ ಜನ್ಮದಿನವನ್ನು‘ದೇಶಪ್ರೇಮ ದಿವಸ್’ ಎಂದೇ ಘೋಷಿಸಬೇಕು. ಈ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.