
ಪ್ರಜಾವಾಣಿ ವಿಶೇಷಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಮಂಡಲ ಸಾಂಸ್ಕೃತಿಕ ಕೇಂದ್ರದ ಧಾತು ಬೊಂಬೆಗಳ ಥಿಯೇಟರ್ನಲ್ಲಿ ನಡೆದ ಅಂತರರಾಷ್ಟ್ರೀಯ ಉತ್ಸವ ನಗರದ ಸಾಂಸ್ಕೃತಿಕ ಹಿರಿಮೆ ಹೆಚ್ಚಿಸಿತು. ಜನವರಿ 9, 10 ಮತ್ತು 11ರಂದು ನಡೆದ ಈ ಉತ್ಸವದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಬಂದ ಕಲಾವಿದರು ಮಾತ್ರವಲ್ಲದೆ ವಿದೇಶಿ ಬೊಂಬೆ ಕಲಾವಿದರೂ ಭಾಗವಹಿಸಿದರು. ಭಾಷೆ, ದೇಶ, ಸಂಸ್ಕೃತಿ ವಿಭಿನ್ನವಾದರೂ ಸೂತ್ರದ ಒಂದೇ ಸ್ಪರ್ಶದಲ್ಲಿ ಎಲ್ಲರೂ ಒಂದಾದ ದೃಶ್ಯವೇ ಉತ್ಸವದ ಸೌಂದರ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.