ಬೆಂಗಳೂರು: ಡಿ.ಜೆ.ಹಳ್ಳಿ ಗಲಭೆ ಸಂಬಂಧ ಬಂಧಿಸಲಾಗಿರುವ ಕೆಲ ಆರೋಪಿಗಳ ಮಕ್ಕಳು, ಠಾಣೆ ಎದುರು ಬಂದು 'ಅಪ್ಪ ಬೇಕು' ಎಂದು ಗೋಳಾಡಿದರು.
ಗಲಭೆ ಸಂಬಂಧ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಇನ್ನು ಕೆಲವರನ್ನು ವಶಕ್ಕೆ ಪಡೆಯಲಾಗಿದೆ.ಠಾಣೆ ಎದುರು ಸೋಮವಾರ ಮಧ್ಯಾಹ್ನ ತಾಯಿ ಜೊತೆ ಬಂದಿದ್ದ ಮಕ್ಕಳು, ಅಪ್ಪ ಬೇಕೆಂದು ಕೂಗಾಡಿದರು.
ಡಿ.ಜೆ.ಹಳ್ಳಿ ಠಾಣೆ ಮುಂದೆ ಮಕ್ಕಳು ರೋಧಿಸಿದರು. 'ಅಪ್ಪ ಬೇಕು' ಎಂದು ಠಾಣೆ ಮುಂದೆ ಮಕ್ಕಳು ಹಠ ಹಿಡಿದರು.
'ತನ್ನ ತಂದೆಯನ್ನು ಕಳಸಿಕೊಡಿ' ಎಂದು ಮಕ್ಕಳು ಗೋಗರೆದರು.
ಪೊಲೀಸರು, ಮಕ್ಕಳನ್ನು ಸಮಾಧಾನಪಡಿಸಿ ಮನೆಗೆ ಕಳುಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.