ಬೆಂಗಳೂರು: ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠ ನೀಡುವ 2023ನೇ ಸಾಲಿನ ‘ಸುವರ್ಣಶ್ರೀ ಪ್ರಶಸ್ತಿ’ಗೆ ಚಲನಚಿತ್ರ ನಟ ದೊಡ್ಡಣ್ಣ ಹಾಗೂ ‘ಜಾನಪದವಿಭೂತಿ ಪ್ರಶಸ್ತಿ’ಗೆ ಕೋಲಾರದ ಕೀರ್ತನ ಕಲಾವಿದ ಎನ್.ಆರ್. ಜ್ಞಾನಮೂರ್ತಿ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯು ಕ್ರಮವಾಗಿ ₹ 50 ಸಾವಿರ ಹಾಗೂ ₹ 25 ಸಾವಿರ ನಗದು ಒಳಗೊಂಡಿದೆ. ಡಿ.10ರಂದು ಸಂಜೆ 6 ಗಂಟೆಗೆ ‘ಜಾನಪದವಿಭೂತಿ ಪ್ರಶಸ್ತಿ’ ಹಾಗೂ ಡಿ.11ರಂದು ಬೆಳಿಗ್ಗೆ 11 ಗಂಟೆಗೆ ‘ಸುವರ್ಣಶ್ರೀ ಪ್ರಶಸ್ತಿ’ ಪ್ರದಾನ ಸಮಾರಂಭವು ಮಠದ ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಮಠದ ಕಾರ್ಯದರ್ಶಿ ಸಿ. ಬಸವರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.