ADVERTISEMENT

ಚಿನ್ನಾಭರಣ ಮೇಳಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2021, 19:53 IST
Last Updated 15 ಅಕ್ಟೋಬರ್ 2021, 19:53 IST
ಮೇಳವನ್ನು ನಟಿ ಪ್ರಿಯಾಂಕ ಉಪೇಂದ್ರ ಉದ್ಘಾಟಿಸಿದರು. ರೂಪದರ್ಶಿಯರು ಇದ್ದಾರೆ.
ಮೇಳವನ್ನು ನಟಿ ಪ್ರಿಯಾಂಕ ಉಪೇಂದ್ರ ಉದ್ಘಾಟಿಸಿದರು. ರೂಪದರ್ಶಿಯರು ಇದ್ದಾರೆ.   

ಬೆಂಗಳೂರು: ಜ್ಯುವೆಲ್ಸ್ ಆಫ್ ಇಂಡಿಯಾ ವತಿಯಿಂದ ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆಯೋಜಿಸಿರುವ ಆಭರಣಗಳ ಮಾರಾಟ ಮತ್ತು ಪ್ರದರ್ಶನ ಮೇಳವನ್ನು ನಟಿ ಪ್ರಿಯಾಂಕ ಉಪೇಂದ್ರ ಶುಕ್ರವಾರ ಉದ್ಘಾಟಿಸಿದರು.

ಅ.18ರವರೆಗೆ ನಡೆಯಲಿರುವ ಚಿನ್ನಾಭರಣ ಮೇಳದಲ್ಲಿ ಭಾರತದ ಅತ್ಯಂತ ಪುರಾತನ ಹಾಗೂ ವಿವಿಧ ವಿನ್ಯಾಸಗಳ ಅಪರೂಪದ ಚಿನ್ನಾಭರಣಗಳನ್ನು ಪ್ರದರ್ಶಿಸಲಾಗುತ್ತಿದೆ.

‘ದಸರಾ ಸಂದರ್ಭದಲ್ಲಿ ದೇಶದ ಎಲ್ಲ ಅತ್ಯುತ್ತಮ ಆಭರಣಗಳು ಒಂದೇ ಸೂರಿನಡಿ ಪ್ರದರ್ಶನವಾಗುತ್ತಿವೆ. ಚಿನ್ನಾಭರಣ ಖರೀದಿಗೆಈ ಮೇಳ ಅತ್ಯುತ್ತಮ ಸಮಯ. ವಿನೂತನ ಹಾಗೂ ಆಕರ್ಷಕ ಆಭರಣ ಮೇಳದಲ್ಲಿ ಬೆಂಗಳೂರಿನ ಮಹಿಳೆಯರಷ್ಟೇ ಅಲ್ಲದೆ, ರಾಜ್ಯದ ಎಲ್ಲರೂ ಭಾಗವಹಿಸಬೇಕು’ ಎಂದು ಪ್ರಿಯಾಂಕ ಉಪೇಂದ್ರ ಹೇಳಿದರು.

ADVERTISEMENT

ಮೇಳದ ಸಂಚಾಲಕ ಸಂದೀಪ್ ಬೇಕಲ್,‘ಎಲ್ಲ ಅಭಿರುಚಿಯ ಹಾಗೂ ಎಲ್ಲ ವರ್ಗದವರ ದರಗಳಿಗೆ ಹೊಂದಿಕೊಳ್ಳುವ ಆಭರಣಗಳನ್ನು ಮೇಳದಲ್ಲಿ ಪ್ರದರ್ಶಿಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.