ಬೆಂಗಳೂರು: ಬೆಸ್ಕಾಂ ವಿದ್ಯುತ್ ಕೇಂದ್ರಗಳಲ್ಲಿ ತುರ್ತು ಕಾರ್ಯನಿರ್ವಹಣೆ ಕೈಗೆತ್ತಿಕೊಂಡಿರುವುದರಿಂದ ಡಿ.15ರಿಂದ 19ರವರೆಗೆ ಬೆಳಿಗ್ಗೆ 10.30ರಿಂದ ಸಂಜೆ 6.30ರವರೆಗೆ ವಿವಿಧ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ವ್ಯತ್ಯಯವಾಗುವ ಸ್ಥಳಗಳು: 15ರಂದು ಎನ್.ಎಸ್.ಪಾಳ್ಯ ಕೈಗಾರಿಕಾ ಪ್ರದೇಶ, ಮಾರೇನಹಳ್ಳಿ, ಜೆ.ಪಿ.ನಗರ 3 ಮತ್ತು 4ನೇ ಹಂತ, ನಾರಾಯಣ ನಗರ ಮೂರನೇ ಬ್ಲಾಕ್, ಶ್ರೀನಿಧಿ ಬಡಾವಣೆ,16ರಂದು ಕೆಇಬಿ ಬಡಾವಣೆ, ಬಿಟಿಎಂ ಬಡಾವಣೆ 1ನೇ ಹಂತ, ಮಂಜುನಾಥ ಕಾಲೊನಿ, ಸಾರಕ್ಕಿ, ಶಾರದಾ ನಗರ, ಗುರಪ್ಪನಪಾಳ್ಯ, ದೊಡ್ಡಕಲ್ಲಸಂದ್ರ, 17ರಂದು ಮಾರೇನಹಳ್ಳಿ, ಜೆ.ಪಿ ನಗರ, ಕೋಣನಕುಂಟೆ, ಅಮೃತನಗರ, ಹರಿನಗರ, 18ರಂದು ಎನ್.ಎಸ್.ಪಾಳ್ಯ ಕೈಗಾರಿಕಾ ಪ್ರದೇಶ, ಸಾರಕ್ಕಿ, ಗಣಪತಿಪುರ, 19ರಂದು ರಾಜನಂದಿನಿ ಆಸ್ಪತ್ರೆ ಸುತ್ತಲ ಪ್ರದೇಶಗಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.