ಬೆಂಗಳೂರು: ಆನೆ ದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ತಮಿಳುನಾಡಿನ ನಾಲ್ವರನ್ನು ಜಾಲಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕೊಯಮತ್ತೂರಿನ ಉನ್ನಿಕೃಷ್ಣನ್ (35), ಚೆನ್ನೈಯ ಜಯಶೀಲನ್ (38), ಸೇಲಂನ ಮಾದೇಶ್ವರನ್ (59) ಮತ್ತು ಈರೂರಿನ ವಿಜಯ್ (37) ಬಂಧಿತರು. ಆರೋಪಿಗಳಿಂದ ಎಂಟು ಆನೆ ದಂತಗಳನ್ನು ವಶಪಡಿಸಿಕೊಳ್ಳಲಾಗಿದೆ.
‘ಇಬ್ಬರು (ಉನ್ನಿಕೃಷ್ಣನ್ ಮತ್ತು ಜಯಶೀಲನ್) ಗೋಣಿ ಚೀಲದಲ್ಲಿ ದಂತಗಳನ್ನು ತುಂಬಿಕೊಂಡು ಕಾಳಿಂಗ ರಾವ್ ವೃತ್ತದ ಬಳಿ ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಅವರಿಬ್ಬರನ್ನೂ ವಿಚಾರಣೆ ನಡೆಸಿದಾಗ, ತಮಗೆ ಆನೆ ದಂತಗಳನ್ನು ಮಾದೇಶ್ವರನ್ ಮತ್ತು ವಿಜಯ್ ತಂದುಕೊಡುತ್ತಿದ್ದರೆಂದು ತಿಳಿಸಿದರು’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.