ADVERTISEMENT

ನಿರ್ಗತಿಕರು, ಪೌರಕಾರ್ಮಿಕರಿಗೆ ಹೊದಿಕೆ ವಿತರಣೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2019, 19:42 IST
Last Updated 9 ಜನವರಿ 2019, 19:42 IST
ರೋಟರಿ ವತಿಯಿಂದ ಪೌರಕಾರ್ಮಿಕರಿಗೆ ಅಧ್ಯಕ್ಷ ಮಂಜುನಾಥ್‌ ಪಾಟೀಲ್‌ ಹೊದಿಕೆಗಳನ್ನು ವಿತರಿಸಿದರು. ಚಿತ್ರದಲ್ಲಿ ಖಜಾಂಚಿ ಎಂ.ಟಿ.ನವೀನಕುಮಾರ್‌, ಪುರಸಭೆ ಸದಸ್ಯ ಎಚ್‌.ಜಿ.ರಾಜು, ಮುಖ್ಯಾಧಿಕಾರಿ ಶಿವಪ್ರಸಾದ್‌, ರೋಟರಿ ಮಾಜಿ ಅಧ್ಯಕ್ಷರಾದ ವಜ್ರಘಟ್ಟ ನಾಗರಾಜು, ಸಿ.ಜಿ.ಮಂಜುನಾಥ್‌ಗೌಡ ಇದ್ದಾರೆ.
ರೋಟರಿ ವತಿಯಿಂದ ಪೌರಕಾರ್ಮಿಕರಿಗೆ ಅಧ್ಯಕ್ಷ ಮಂಜುನಾಥ್‌ ಪಾಟೀಲ್‌ ಹೊದಿಕೆಗಳನ್ನು ವಿತರಿಸಿದರು. ಚಿತ್ರದಲ್ಲಿ ಖಜಾಂಚಿ ಎಂ.ಟಿ.ನವೀನಕುಮಾರ್‌, ಪುರಸಭೆ ಸದಸ್ಯ ಎಚ್‌.ಜಿ.ರಾಜು, ಮುಖ್ಯಾಧಿಕಾರಿ ಶಿವಪ್ರಸಾದ್‌, ರೋಟರಿ ಮಾಜಿ ಅಧ್ಯಕ್ಷರಾದ ವಜ್ರಘಟ್ಟ ನಾಗರಾಜು, ಸಿ.ಜಿ.ಮಂಜುನಾಥ್‌ಗೌಡ ಇದ್ದಾರೆ.   

ನೆಲಮಂಗಲ: ರಸ್ತೆ ಬದಿ ಮಲಗಿರುವ ನಿರ್ಗತಿಕರು, ಭಿಕ್ಷುಕರು ಹಾಗೂ ಪೌರ ಕಾರ್ಮಿಕರಿಗೆ ಇಲ್ಲಿನ ರೋಟರಿ ಕ್ಲಬ್‌ ವತಿಯಿಂದ ಹೊದಿಕೆ ವಿತರಿಸಲಾಯಿತು.ಮಂಗಳವಾರ ಬೆಳಗಿನ ಜಾವ ರೋಟರಿ ಸದಸ್ಯರು ಪಟ್ಟಣದಲ್ಲಿ ತಿರುಗಾಡಿ ಹೊದಿಕೆ ವಿತರಿಸಿದರು.

ಕ್ಲಬ್‌ ಅಧ್ಯಕ್ಷ ಮಂಜುನಾಥ್‌ ಪಾಟೀಲ್ ಮಾತನಾಡಿ, ‘ಮೈತುಂಬಾ ಬಟ್ಟೆ, ಒಂದು ಹೊತ್ತಿನ ಊಟಕ್ಕೂ ಪರದಾಡುವವರು ನಮ್ಮ ನಡುವೆ ಇದ್ದಾರೆ. ಅವರ ಜೀವನದಲ್ಲಿ ಭರವಸೆ ಮೂಡಿಸಲು ಹೊದಿಕೆಗಳನ್ನು ರೋಟರಿ ವತಿಯಿಂದ ನೀಡುತ್ತಿದ್ದೇವೆ’ ಎಂದರು.

ಖಜಾಂಚಿ ಎಂ.ಟಿ.ನವೀನಕುಮಾರ್, ‘ನಿರ್ಗತಿಕರು ಅರ್ಥಪೂರ್ಣ ಜೀವನ ಸಾಗಿಸಲು ರೋಟರಿಯಿಂದ ಯೋಜನೆ ರೂಪಿಸುತ್ತಿದ್ದು, ಹೊದಿಕೆ ನೀಡುತ್ತಿರುವುದು ಪ್ರಾರಂಭಿಕ ಕಾರ್ಯಕ್ರಮ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.