ADVERTISEMENT

ಕೊರೊನಾ ಭೀತಿಯಲ್ಲೇ ಸಿನಿ ದಿಗ್ಗಜರ ನಡುವೆ ಜಗಳ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2020, 2:04 IST
Last Updated 29 ಏಪ್ರಿಲ್ 2020, 2:04 IST
ಜೈ ಜಗದೀಶ್ ಮತ್ತು ಸಾ.ರಾ.ಗೋವಿಂದು
ಜೈ ಜಗದೀಶ್ ಮತ್ತು ಸಾ.ರಾ.ಗೋವಿಂದು   

ಬೆಂಗಳೂರು: ಕೊರೊನಾ ವೈರಾಣು ಭೀತಿ ನಡುವೆಯೇ ಚಲನಚಿತ್ರ ವಾಣಿಜ್ಯ ಮಂಡಳಿ ವಿಚಾರವಾಗಿ ಸಾ.ರಾ. ಗೋವಿಂದ್ ಮತ್ತು ಜೈ ಜಗದೀಶ್ ನಡುವೆ ಜಗಳ ಆಗಿದೆ.

ಮಂಡಳಿಯಿಂದ ಸಿನಿ ಕಾರ್ಮಿಕರಿಗೆ ದಿನಸಿಹಂಚಿಕೆ ಹಾಗೂ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ಸಂಬಂಧ ಮಾತಿಗೆ ಮಾತು ಬೆಳೆದು ಮಂಗಳವಾರ ಇಬ್ಬರೂ ಪರಸ್ಪರ ಕೈ ಕೈ ಮಿಲಾಯಿಸಿದ್ದರು. ಸ್ಥಳದಲ್ಲಿದ್ದ ಹಿರಿಯರು ಜಗಳ ಬಿಡಿಸಿದ್ದಾರೆ ಎಂದು ಗೊತ್ತಾಗಿದೆ.

ಈ ಜಗಳ ಸಂಬಂಧ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರಿಗೆ ಸಾ.ರಾ.ಗೋವಿಂದ್ ದೂರು ನೀಡಿದ್ದಾರೆ.
ಸದ್ಯಕ್ಕೆ ಯಾವ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.