ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಕೇರಳದಲ್ಲಿ ಕಾರ್ಯಕರ್ತರು ಅದ್ಧೂರಿಯಾಗಿಮಾಡಿರುವ ಮೆರವಣಿಗೆಯ ವಿಡಿಯೊವನ್ನುಶನಿವಾರ ಇಲ್ಲಿ ತೋರಿಸುವ ಮೂಲಕ ಪಾಠ ಮಾಡಿದ ಪ್ರಸಂಗ ನಡೆಯಿತು.
ಪಕ್ಷದ ಕಚೇರಿಯಲ್ಲಿಮಹಿಳಾ ಕಾರ್ಯಕರ್ತರಿಗೆ ಸಭೆ ಏರ್ಪಡಿಸಲಾಗಿತ್ತು. ‘ಕೇರಳದ ಕ್ಯಾಲಿಕಟ್ನಲ್ಲಿನಮ್ಮ ಪಕ್ಷದವರು ಹೇಗೆ ಶಿಸ್ತಿನಿಂದ ಪ್ರತಿಭಟನೆ ಮಾಡುತ್ತಾರೆ ನೋಡಿ, ಅದನ್ನು ತೋರಿಸುವುದಕ್ಕೆ ನಿಮಗೆ ಈ ವಿಡಿಯೊ ತೋರಿಸುತ್ತಿದ್ದೇನೆ.ಮುಂದಿನ ವರ್ಷ ಕೇರಳದಲ್ಲಿ ವಿಧಾನಸಭೆ ಚುನಾವಣೆ ಇದೆ, ಅವರು ಈಗಿನಿಂದಲೇ ಹೇಗೆ ಕೆಲಸ ಮಾಡುತ್ತಿದ್ದಾರೆ ನೋಡಿ’ ಎಂದರು.
‘ಎರಡು ಗ್ರಹಣ ಕಳೆದ ಬಳಿಕ ಇದೇ ಮೊದಲ ಬಾರಿಗೆ ಪಕ್ಷದ ಕಚೇರಿಗೆ ಬರುತ್ತಿದ್ದೇನೆ.ಕೇರಳದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯಲು ಹೋಗಿದ್ದೆ, ವಿಶ್ರಾಂತಿ ಪಡೆಯಲು ಹೇಳಿದ್ದರು‘ ಎಂದರು.
‘ನಮಗೆಲ್ಲಾ ಹೆಚ್ಚಿನ ಶಕ್ತಿ ಸಿಗಬೇಕಾದರೆ ದೇವೇಗೌಡರು ರಾಜ್ಯಸಭೆಗೆ ಹೋಗಬೇಕು’ ಎಂದು ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಲೀಲಾದೇವಿ ಆರ್.ಪ್ರಸಾದ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.