ಬೆಂಗಳೂರು: ಸ್ವಚ್ಛತೆಯ ಬಗ್ಗೆಅತಿಯಾಗಿ ಕಾಳಜಿ ವಹಿಸುತ್ತಿದ್ದ ಯುವಕನೋರ್ವ ದಿನಕ್ಕೆ 8 ತಾಸು ಸ್ನಾನ ಮಾಡಿ, ಮೂರು ಸಾಬೂನುಗಳನ್ನು ಖಾಲಿ ಮಾಡುತ್ತಿದ್ದ. ಇದರಿಂದಾಗಿ ಆತನ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಈ ಸಮಸ್ಯೆಯನ್ನು ಪತ್ತೆ ಮಾಡಿ ಚಿಕಿತ್ಸೆ ಕೊಡಿಸುವಲ್ಲಿ ನಗರದ ವೈದ್ಯರು ಯಶಸ್ವಿಯಾಗಿದ್ದಾರೆ.
ಎಷ್ಟು ಉಜ್ಜಿದರೂ ದೇಹ ಸರಿಯಾಗಿ ಸ್ವಚ್ಛವಾಗುತ್ತಿಲ್ಲ ಎಂದು ಭಾವಿಸುವ ಯುವಕ, ಮತ್ತೆ ಮತ್ತೆ ಸ್ನಾನ ಮಾಡುತ್ತಿದ್ದ. ದಿನಕ್ಕೆ ಎರಡರಿಂದ ಮೂರು ಬಾರಿಯಾದರೂ ಸ್ನಾನ ಮಾಡುತ್ತಿರುವುದು ಕುಟುಂಬದ ಸದಸ್ಯರಿಗೆ ಆತಂಕ ಉಂಟುಮಾಡಿತ್ತು.ಇದರಿಂದಾಗಿ ಯುವಕನನ್ನು ಯಲಹಂಕದ ಪೀಪಲ್ ಟ್ರೀ ಮಾರ್ಗ ಆಸ್ಪತ್ರೆಗೆ ಕರೆದೊಯ್ದ ಕುಟುಂಬದ ಸದಸ್ಯರು, ಈ ಬಗ್ಗೆ ವೈದ್ಯರಿಗೆ ತಿಳಿಸಿದರು. ಡಾ.ಸತೀಶ್ ರಾಮಯ್ಯ ನೇತೃತ್ವದ ವೈದ್ಯರ ತಂಡ ಯುವಕ ಸ್ವಚ್ಛತೆಯ ಗೀಳಿನಿಂದ ಮುಕ್ತವಾಗುವುದಕ್ಕೆ ನೆರವಾಗಿದೆ.
ಇದೇ ರೀತಿ, ನಗರದ ಸಾಫ್ಟ್ವೇರ್ ಸಂಸ್ಥೆಯಲ್ಲಿ ಕೆಲಸಕ್ಕಿದ್ದ ಯುವತಿಯೊಬ್ಬರು ಇ–ಮೇಲ್ ಗೀಳು ಹೊಂದಿರುವುದನ್ನು ವೈದ್ಯರು ಪತ್ತೆಮಾಡಿದ್ದಾರೆ.ತಪ್ಪಾದಇ-ಮೇಲ್ಕಳುಹಿಸಿರುವೆ ಎಂದು ಭಾವಿಸುತ್ತಿದ್ದ ಆಕೆ ಪದೇ ಪದೇ ಲ್ಯಾಪ್ಟ್ಯಾಪ್ತೆಗೆದುನೋಡುತ್ತಿದ್ದಳು. ಈ ಗೀಳನ್ನು ಗುರುತಿಸಿ, ಚಿಕಿತ್ಸೆ ನೀಡಲಾಗಿದೆ.
ಯುವಕರಲ್ಲೇ ಅಧಿಕ:‘ಗೀಳು ರೋಗವನ್ನು ನಿರ್ಲಕ್ಷ್ಯ ಮಾಡಬಾರದು. ಚಿಕಿತ್ಸೆ ಸಿಗದಿದ್ದರೆ ರೋಗಿಯ ಸ್ಥಿತಿಗಂಭೀರ ವಾಗುತ್ತದೆ. ಇದು ಯಾರಿಗೆ ಬೇಕಾದರೂಬರಬಹುದು. 20ರಿಂದ 30 ವರ್ಷದೊಳಗಿನವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ರೋಗಿಗಂಭೀರಸ್ಥಿತಿತಲುಪುವಮೊದಲೇವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ’ ಎಂದು ಡಾ.ಸತೀಶ್ರಾಮಯ್ಯತಿಳಿಸಿದರು.
‘ರೋಗಿಗಳುತಮಗೆಅರಿವುಇದ್ದರೂವಿಚಿತ್ರವಾದಗೀಳನ್ನುಬೆಳೆಸಿಕೊಂಡಿರುತ್ತಾರೆ.ಗೀಳು ರೋಗದ ಬಗ್ಗೆ ಗೊತ್ತಾದರೂ ಚಿಕಿತ್ಸೆಪಡೆಯಲು ಕೆಲವರು ಹಿಂಜರಿಯುತ್ತಾರೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅಗತ್ಯ ಇದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.