ADVERTISEMENT

ಗಾಳಿ ಮಳೆ: ನೆಲಕ್ಕುರುಳಿದ ಮರಗಳು

ಇದೇ 16, 17ರಂದು ಭಾರಿ ಮಳೆ ಮುನ್ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 20:09 IST
Last Updated 14 ಆಗಸ್ಟ್ 2019, 20:09 IST
ನಗರದಲ್ಲಿ ಬುಧವಾರ ಸುರಿದ ಮಳೆಗೆ ಕಬ್ಬನ್ ರಸ್ತೆಯ ತಗ್ಗು ಪ್ರದೇಶದಲ್ಲಿ ನಿಂತಿದ್ದ ನೀರು ಪ್ರಜಾವಾಣಿ ಚಿತ್ರ ಜನಾರ್ಧನ್ ಬಿ ಕೆ
ನಗರದಲ್ಲಿ ಬುಧವಾರ ಸುರಿದ ಮಳೆಗೆ ಕಬ್ಬನ್ ರಸ್ತೆಯ ತಗ್ಗು ಪ್ರದೇಶದಲ್ಲಿ ನಿಂತಿದ್ದ ನೀರು ಪ್ರಜಾವಾಣಿ ಚಿತ್ರ ಜನಾರ್ಧನ್ ಬಿ ಕೆ   

ಬೆಂಗಳೂರು: ಕೆಲವು ದಿನಗಳಿಂದ ನಗರದ ಅಲ್ಲಲ್ಲಿ ತುಂತುರು ಮಳೆ ಸುರಿಯುತ್ತಿದ್ದು, ಬುಧವಾರ ಜೋರಾಗಿ ಸುರಿದಿದೆ.

ಅಲ್ಲದೆ, ಇದೇ 16 ಮತ್ತು 17ರಂದು ನಗರದಲ್ಲಿ ಭಾರಿ ಪ್ರಮಾಣದಲ್ಲಿ ವರ್ಷಧಾರೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಳೆ ಸುರಿದರೂ ತಾಪಮಾನ ಕಡಿಮೆಯಾಗಿಲ್ಲ. ಕೇಂದ್ರ ಭಾಗಗಳಲ್ಲಿ 28.4 ಡಿಗ್ರಿ, ಎಚ್‍ಎಎಲ್‍ನಲ್ಲಿ 28.8 ಡಿಗ್ರಿ, ಕೆಐಎಎಲ್‍ನಲ್ಲಿ 28.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ADVERTISEMENT

ಬೆಳಿಗ್ಗೆ ಬಿಸಿಲಿನ ವಾತಾವರಣವಿದ್ದರೆ, ಸಂಜೆಯಾಗುತ್ತಿದ್ದಂತೆ ಮೋಡ ಕವಿದು ಮಳೆ ಸುರಿಯಲು ಆರಂಭವಾಯಿತು. ನಗರದ ಉತ್ತರ ಭಾಗದ ಕೆಲವು ಪ್ರದೇಶಗಳಲ್ಲಿ ಸಾಮಾನ್ಯ ಪ್ರಮಾಣದಲ್ಲಿ ಮಳೆ ಸುರಿದರೆ, ದಕ್ಷಿಣದ ಕೆಲವು ಪ್ರದೇಶಗಳಲ್ಲಿ ಗಾಳಿ ಸಹಿತ ಭಾರಿ ಮಳೆ ಸುರಿಯಿತು. ವಿದ್ಯಾಪೀಠ, ದಾಸನಪುರ, ಯಶವಂತಪುರದಲ್ಲಿ ತುಂತುರು ಮಳೆಯಾಗಿದೆ.

ಜೋರಾಗಿ ಬೀಸಿದ ಗಾಳಿಗೆ ಕೆಲವು ಕಡೆ ಮರಗಳು ಉರುಳಿ ಬಿದ್ದಿವೆ. ಶ್ರೀನಗರ ಬಸ್ ನಿಲ್ದಾಣ, ಶ್ರೀನಿವಾಸನಗರ ಮುಖ್ಯ ರಸ್ತೆ, ಜಯನಗರ ನಾಲ್ಕನೇ ಹಂತದ ಬಿಬಿಎಂಪಿ ಶಾಪಿಂಗ್ ಕಾಂಪ್ಲೆಕ್ ಬಳಿ‌ ಮರಗಳು ನೆಲಕ್ಕುರುಳಿವೆ.

ಎಲ್ಲಿ, ಎಷ್ಟು ಮಳೆ?: ಎಚ್‍ಎಂಟಿ ವಾರ್ಡ್ 26 ಮಿ.ಮೀ., ವಿ. ನಾಗೇನಹಳ್ಳಿ 25 ಮಿ.ಮೀ., ಎಚ್‍ಬಿಆರ್ ಲೇಔಟ್‍ 24 ಮಿ.ಮೀ., ಬ್ಯಾಟರಾಯನಪುರ, ವಿದ್ಯಾರಣ್ಯಪುರ 23 ಮಿ.ಮೀ., ದೊಡ್ಡಬೊಮ್ಮಸಂದ್ರ, ಕೊಡಿಗೇಹಳ್ಳಿ 22 ಮಿ.ಮೀ., ಬಾಗಲಗುಂಟೆ, ಮಾದಾವರ, ಚಿಕ್ಕಬಿದರಕಲ್ಲು, ಯಲಹಂಕ 21 ಮಿ.ಮೀ., ಪೀಣ್ಯ 19 ಮಿ.ಮೀ., ಬಾಣಸವಾಡಿ, ನಂದಿನಿ ಲೇಔಟ್‍ 18 ಮಿ.ಮೀ., ಬಿದರಹಳ್ಳಿ, ಸಿದ್ದನಹೊಸಹಳ್ಳಿ ತಲಾ 17 ಮಿ.ಮೀ., ಅರಕೆರೆ, ಹೊರಮಾವು 15 ಮಿ.ಮೀ., ಕಮ್ಮನಹಳ್ಳಿ, ರಾಧಾಕೃಷ್ಣ ದೇವಸ್ಥಾನ ವಾರ್ಡ್‌ 14 ಮಿ.ಮೀ., ಅಗ್ರಹಾರ ದಾಸರಹಳ್ಳಿ, ಹೇರೋಹಳ್ಳಿ 13 ಮಿ.ಮೀ., ರಾಜಾನುಕುಂಟೆ 12 ಮಿ.ಮೀ., ಚಾಮರಾಜಪೇಟೆ, ಮಾದನಾಯಕನಹಳ್ಳಿ 11 ಮಿ.ಮೀ., ಗೋಪಾಲಪುರ, ಮಾಚೋಹಳ್ಳಿ, ಐಟಿಸಿ ಜಾಲ 9 ಮಿ.ಮೀ., ವಿ.ವಿ.ಪುರದಲ್ಲಿ 8 ಮಿ.ಮೀ. ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.