ADVERTISEMENT

ಯುವಕ ಆತ್ಮಹತ್ಯೆ; ಅಂತ್ಯಕ್ರಿಯೆ ನೆರವೇರಿಸಿದ ಸಂಬಂಧಿ

ಆರ್ಥಿಕ ಅಸಹಾಯಕತೆ; ಅಂತ್ಯಸಂಸ್ಕಾರಕ್ಕೆ ಬರಲಾಗದ ತಾಯಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 20:03 IST
Last Updated 16 ಡಿಸೆಂಬರ್ 2018, 20:03 IST
ಲಕ್ಷ್ಮಣ್ ಲಿಂಬೋ
ಲಕ್ಷ್ಮಣ್ ಲಿಂಬೋ   

ಬೆಂಗಳೂರು: ನಗರಕ್ಕೆ ಸಿಕ್ಕಿಂನಿಂದ ಬಂದು ಎಂಟೇ ದಿನದಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕ. ಕಡುಬಡತನದ ಕಾರಣದಿಂದ ಮೃತದೇಹ ನೋಡಲು ಅವನ ತಾಯಿಗೆ ಬರಲಾಗದೆ ಸಮೀಪದ ಬಂಧು ಅಂತ್ಯಸಂಸ್ಕಾರ ನಡೆಸಿದರು.

ಹೆಸರಘಟ್ಟ ಸಮೀಪದಹುರುಳಿ ಚಿಕ್ಕನಹಳ್ಳಿ ಗ್ರಾಮದ ಬ್ಲ್ಯಾಕ್‌ ಆ್ಯಂಡ್‌ ವೈಟ್ ಡಾಬಾದಲ್ಲಿ 8 ದಿನಗಳ ಹಿಂದೆಅಡುಗೆ ಸಹಾಯಕನಾಗಿ ಲಕ್ಷ್ಮಣ್ ಲಿಂಬೋ (18) ಸೇರಿಕೊಂಡಿದ್ದ. ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡ. ಘಟನೆಗೆ ಕಾರಣ ತಿಳಿದುಬಂದಿಲ್ಲ ಎಂದುಸೋಲದೇವನಹಳ್ಳಿ ಠಾಣೆ ಪೊಲೀಸರು ತಿಳಿಸಿದರು.

ಯುವಕನ ತಾಯಿ ಸಾವಿತ್ರಿ ಲಿಂಬೋ ಸಿಕ್ಕಿಂನಲ್ಲಿ ವಾಸವಾಗಿದ್ದಾರೆ. ಕಡು ಬಡತನ ಇರುವುದರಿಂದ ಮಗನ ಅಂತ್ಯ ಸಂಸ್ಕಾರವನ್ನು ಬೆಂಗಳೂರಿನಲ್ಲಿ ಮಾಡುವಂತೆ ಪೋಲಿಸರಿಗೆ ಕೋರಿದರು. ತಾಯಿ ಒಪ್ಪಿಗೆ ಮೇರೆಗೆ ಮೃತನ ಭಾವ ಅಂತ್ಯ ಸಂಸ್ಕಾರ ನೆರವೇರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.