ADVERTISEMENT

ಮೆಟ್ರೊದಲ್ಲಿ ಹಿಂದಿ: ಕನ್ನಡಿಗರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 20:32 IST
Last Updated 16 ಫೆಬ್ರುವರಿ 2020, 20:32 IST
ಪೀಣ್ಯ ಮೆಟ್ರೊ ನಿಲ್ದಾಣದ ಒಳಗೆ ಹಿಂದಿಯಲ್ಲಿ ಬರೆದಿರುವ ವಾಕ್ಯ
ಪೀಣ್ಯ ಮೆಟ್ರೊ ನಿಲ್ದಾಣದ ಒಳಗೆ ಹಿಂದಿಯಲ್ಲಿ ಬರೆದಿರುವ ವಾಕ್ಯ   

ಬೆಂಗಳೂರು: ‘ನಮ್ಮ ಮೆಟ್ರೊ’ದ ಪೀಣ್ಯ ಮೆಟ್ರೊ ನಿಲ್ದಾಣ ಪ್ಲಾಟ್‌ಫಾರಂ ಬಳಿ ಗೋಡೆಯ ಮೇಲೆ ‘ಆಪ್‌ ಸೇ ಬಾತ್‌ ಕರ್‌ ಕೆ ಖುಷಿ ಮಿಲಿ’ (ನಿಮ್ಮೊಂದಿಗೆ ಮಾತನಾಡಿ ಖುಷಿಯಾಯಿತು) ಎಂಬ ಹಿಂದಿ ವಾಕ್ಯ ಬರೆದಿರುವುದಕ್ಕೆ ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದು, ಅದನ್ನು ತೆಗೆಸುವಂತೆ ಒತ್ತಾಯಿಸಿದ್ದಾರೆ.

‘ಮೆಟ್ರೊ ನಿಲ್ದಾಣದೊಳಗೆ ಹಿಂದಿಯಲ್ಲಿ ಈ ಸಾಲು ಬರೆಯುವ ಅವಶ್ಯಕತೆ ಏನಿತ್ತು ಎಂಬುದು ತಿಳಿಯುತ್ತಿಲ್ಲ. ಕ್ರಮೇಣವಾಗಿ ನಮ್ಮ ಮೆಟ್ರೊವನ್ನು ಹಿಂದಿಮಯ ಮಾಡುವ ಹುನ್ನಾರ ಇದು’ ಎಂದು ಪ್ರಯಾಣಿಕ ಡಾ. ಎ. ಭಾನು ದೂರಿದರು.

‘ಈ ಸಾಲು 2014ರಿಂದ ನಿಲ್ದಾಣದಲ್ಲಿದೆ. ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳು ಈ ಸಾಲುಗಳನ್ನು ಬರೆದಿದ್ದಾರೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಈ ಬರಹದಲ್ಲಿ ಯಾವ ರೀತಿಯ ಕಲೆ ಇದೆಯೋ ತಿಳಿಯುತ್ತಿಲ್ಲ’ ಎಂದು ಪ್ರಯಾಣಿಕರು ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.